ಬೆಂಗಳೂರು: ‘ಶಿಕ್ಷಣ ಮತ್ತು ಮೂಲ ಸೌಕರ್ಯ ಒದಗಿಸುವುದು ಹಾಗೂ ಪೋಲಿಯೊ ನಿರ್ಮೂಲನೆಯಂತಹ ಸಾಮಾಜಿಕ ಸೇವೆಯ ಉದ್ದೇಶದಿಂದ ಉದ್ಯಮಿಗಳು ಮತ್ತು ವ್ಯಾಪಾರಿಗಳು ಒಂದೆಡೆ ಸೇರಿರುವ ವೇದಿಕೆಯೇ ರೋಟರಿ ಇಂಟರ್ನ್ಯಾಷನಲ್’ ಎಂದು ರೋಟರಿ ಇಂಟರ್ನ್ಯಾಷನಲ್ನ ಬೆಂಗಳೂರು ಜಿಲ್ಲಾ ಕ್ಲಬ್ನ ಸದಸ್ಯ ಡಾ.ಎಸ್.ನಾಗೇಂದ್ರ ಹೇಳಿದರು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಮತ್ತು ರೋಟರಿ ಕ್ಲಬ್ ವತಿಯಿಂದ ಬುಧವಾರ ಏರ್ಪಡಿಸಿದ್ದ ರೋಟರಿ ಇಂಟರ್ ನ್ಯಾಷನಲ್ನ ಸಂಸ್ಥಾಪಕ ಪಾಲ್ ಹ್ಯಾರಿಸ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರೋಟರಿ ವತಿಯಿಂದ ನಗರದಲ್ಲಿ ಉಚಿತ ಆರೋಗ್ಯ ತಪಾಸಣೆ, ಉಚಿತ ಕೃತಕ ಕೈಕಾಲು ಜೋಡಣೆ ಮತ್ತು ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತಿದೆ. ಗ್ರಾಮಾಂತರ ಪ್ರದೇಶಗಳ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲಾಗಿದೆ’ ಎಂದರು.