<p><strong>ಬೆಂಗಳೂರು: </strong>‘ಮಹಿಳೆಯರು ಹಾಗೂ ತಳ ಸಮುದಾಯದ ಸಂಕಟಗಳನ್ನು ನಾವು ಅರಿತಿದ್ದರೂ ಗೊತ್ತಿಲ್ಲದವರಂತೆ ನಟಿಸುತ್ತೇವೆ. ಆದರೆ, ವಸು ಮಳಲಿ ಅವರು ಶೋಷಿತ ವರ್ಗದ ಪರವಾಗಿ ನಿರಂತರ ಹೋರಾಟ ಮಾಡಿದ್ದರು’ ಎಂದು ಲೇಖಕ ಡಾ.ಎಲ್.ಎನ್. ಮುಕುಂದರಾಜ್ ನೆನಪಿಸಿಕೊಂಡರು.<br /> <br /> ಸಾಹಿತ್ಯಾಸಕ್ತರ ಕೂಟ ‘ಕಾಜಾಣ’ ವತಿಯಿಂದ ನಾಟಕ ಅಕಾಡೆಮಿಯ ಚಾವಣಿಯಲ್ಲಿ ಬುಧವಾರ ಆಯೋಜಿಸಿದ್ದ ‘ಡಾ.ವಸು ಮಳಲಿ (ವಸು ಮೇಡಂ) ನುಡಿ ನಮನ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.<br /> <br /> ‘ನಮ್ಮಲ್ಲಿ ನಿಜವಾದ ಚರಿತ್ರೆಯನ್ನು ಮರೆಮಾಚಿ ಹೊಸ ಪುರಾಣವನ್ನು ಸೃಷ್ಟಿಸುವ ಪರಿಪಾಠ ಹೆಚ್ಚಾಗುತ್ತಿದೆ. ಇದರಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ವಸು ಅವರು ನಿಜವಾದ ಚರಿತ್ರೆಯನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಿದರು. ಸಾಮಾನ್ಯ ಜನರಿಗೆ ಅರ್ಥವಾಗುವ ಹಾಗೆ ವಿಷಯ ಮಂಡಿಸುತ್ತಿದ್ದರು’ ಎಂದರು.<br /> <br /> ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ವಸು ಅವರು ಜ್ಞಾನದ ನಿಧಿ. ತಳಸ್ಪರ್ಶಿ ಸಂಶೋಧನೆ ನಡೆಸಿದ್ದರು. ಈಗಲೂ ಕಣ್ಣ ಮುಂದೆ ಇದ್ದಾರೆ ಎಂಬ ಭಾವ ಮೂಡುತ್ತಿದೆ’ ಎಂದರು.<br /> <br /> ಸಂಸ್ಕೃತಿ ಚಿಂತಕ ಡಾ.ಡೊಮಿನಿಕ್ ಮಾತನಾಡಿ, ‘ವಸು ಅವರು ಮಹಿಳೆಯರು, ದಲಿತರು ಹಾಗೂ ಹಿಂದುಳಿದವರ ಪರವಾಗಿ ಸದಾ ಧ್ವನಿ ಎತ್ತಿದ್ದರು. ಹೋರಾಟಗಳಲ್ಲಿ ಮಂಚೂಣಿಯಲ್ಲಿದ್ದರು. ಅವರು ಪ್ರಖರ ಚಿಂತಕಿ’ ಎಂದರು.<br /> <br /> ಲೇಖಕ ಆರ್.ಜಿ.ಹಳ್ಳಿ ನಾಗರಾಜು ಮಾತನಾಡಿ, ‘ಅವರು ಅತ್ಯುತ್ತಮ ವಾಗ್ಮಿ. ಅನಾರೋಗ್ಯದ ನಡುವೆಯೂ ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಯುವಜನರಿಗೆ ಸ್ಫೂರ್ತಿ ಆಗಿದ್ದರು’ ಎಂದರು. ಲೇಖಕ ಸಿ.ಜಿ.ಲಕ್ಷ್ಮಿಪತಿ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಮಹಿಳೆಯರು ಹಾಗೂ ತಳ ಸಮುದಾಯದ ಸಂಕಟಗಳನ್ನು ನಾವು ಅರಿತಿದ್ದರೂ ಗೊತ್ತಿಲ್ಲದವರಂತೆ ನಟಿಸುತ್ತೇವೆ. ಆದರೆ, ವಸು ಮಳಲಿ ಅವರು ಶೋಷಿತ ವರ್ಗದ ಪರವಾಗಿ ನಿರಂತರ ಹೋರಾಟ ಮಾಡಿದ್ದರು’ ಎಂದು ಲೇಖಕ ಡಾ.ಎಲ್.ಎನ್. ಮುಕುಂದರಾಜ್ ನೆನಪಿಸಿಕೊಂಡರು.<br /> <br /> ಸಾಹಿತ್ಯಾಸಕ್ತರ ಕೂಟ ‘ಕಾಜಾಣ’ ವತಿಯಿಂದ ನಾಟಕ ಅಕಾಡೆಮಿಯ ಚಾವಣಿಯಲ್ಲಿ ಬುಧವಾರ ಆಯೋಜಿಸಿದ್ದ ‘ಡಾ.ವಸು ಮಳಲಿ (ವಸು ಮೇಡಂ) ನುಡಿ ನಮನ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.<br /> <br /> ‘ನಮ್ಮಲ್ಲಿ ನಿಜವಾದ ಚರಿತ್ರೆಯನ್ನು ಮರೆಮಾಚಿ ಹೊಸ ಪುರಾಣವನ್ನು ಸೃಷ್ಟಿಸುವ ಪರಿಪಾಠ ಹೆಚ್ಚಾಗುತ್ತಿದೆ. ಇದರಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ವಸು ಅವರು ನಿಜವಾದ ಚರಿತ್ರೆಯನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಿದರು. ಸಾಮಾನ್ಯ ಜನರಿಗೆ ಅರ್ಥವಾಗುವ ಹಾಗೆ ವಿಷಯ ಮಂಡಿಸುತ್ತಿದ್ದರು’ ಎಂದರು.<br /> <br /> ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ವಸು ಅವರು ಜ್ಞಾನದ ನಿಧಿ. ತಳಸ್ಪರ್ಶಿ ಸಂಶೋಧನೆ ನಡೆಸಿದ್ದರು. ಈಗಲೂ ಕಣ್ಣ ಮುಂದೆ ಇದ್ದಾರೆ ಎಂಬ ಭಾವ ಮೂಡುತ್ತಿದೆ’ ಎಂದರು.<br /> <br /> ಸಂಸ್ಕೃತಿ ಚಿಂತಕ ಡಾ.ಡೊಮಿನಿಕ್ ಮಾತನಾಡಿ, ‘ವಸು ಅವರು ಮಹಿಳೆಯರು, ದಲಿತರು ಹಾಗೂ ಹಿಂದುಳಿದವರ ಪರವಾಗಿ ಸದಾ ಧ್ವನಿ ಎತ್ತಿದ್ದರು. ಹೋರಾಟಗಳಲ್ಲಿ ಮಂಚೂಣಿಯಲ್ಲಿದ್ದರು. ಅವರು ಪ್ರಖರ ಚಿಂತಕಿ’ ಎಂದರು.<br /> <br /> ಲೇಖಕ ಆರ್.ಜಿ.ಹಳ್ಳಿ ನಾಗರಾಜು ಮಾತನಾಡಿ, ‘ಅವರು ಅತ್ಯುತ್ತಮ ವಾಗ್ಮಿ. ಅನಾರೋಗ್ಯದ ನಡುವೆಯೂ ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಯುವಜನರಿಗೆ ಸ್ಫೂರ್ತಿ ಆಗಿದ್ದರು’ ಎಂದರು. ಲೇಖಕ ಸಿ.ಜಿ.ಲಕ್ಷ್ಮಿಪತಿ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>