ಮುಂಬೈ (ಪಿಟಿಐ):‘ಭಾರತ ಕ್ರಿಕೆಟ್ ತಂಡ ಇಂದಿನಿಂದಲೇ 2019ರ ವಿಶ್ವಕಪ್ಗೆ ಸಿದ್ಧಗೊಳ್ಳಬೇಕು’ ಎಂದು ಮಾಜಿ ಆಟಗಾರ ಚಂದು ಬೋರ್ಡೆ ಹೇಳಿದ್ದಾರೆ.
‘ಆಸ್ಟ್ರೇಲಿಯಾ ಅತ್ಯುತ್ತಮ ರೀತಿಯಲ್ಲಿ ವಿಶ್ವಕಪ್ಗೆ ಸಿದ್ಧಗೊಂಡಿತ್ತು. ಅದೇ ರೀತಿ ಭಾರತ ಕೂಡ ಈಗಿನಿಂದಲೇ ವ್ಯವಸ್ಥಿತವಾದ ಯೋಜನೆಗಳನ್ನು ರೂಪಿಸುವುದು ಒಳಿತು’ ಎಂದಿದ್ದಾರೆ.
‘ಮೈಕಲ್ ಕ್ಲಾರ್ಕ್ ವಿಶ್ವಕಪ್ನ ಮೊದಲ ಕೆಲ ಪಂದ್ಯಗಳಲ್ಲಿ ಆಡಲಿಲ್ಲ. ಜಾರ್ಜ್ ಬೇಲಿ ತಂಡವನ್ನು ಮುನ್ನಡೆಸಿದರು. ಆದರೂ ತಂಡ ಉತ್ತಮವಾಗಿ ಆಡಿ ವಿಶ್ವಕಪ್ ಗೆದ್ದುಕೊಂಡಿದೆ. ಇದನ್ನು ನೋಡಿದರೆ ಅವರ ಸಿದ್ಧತೆ ಹೇಗಿತ್ತು ಎಂಬುದು ತಿಳಿಯುತ್ತದೆ’ ಎಂದು ಬೋರ್ಡೆ ಹೇಳಿದ್ದಾರೆ.