‘ಕನ್ನಡದ ಕಗ್ಗಂಟು ಸಲ್ಲದು’ (ವಾ.ವಾ., ಡಿ. 2). ‘ಮೊಬೈಲ್’ ದೂರವಾಣಿಯ ಬಗೆಗೆ ಸಂಪತ್ ಬೆಟ್ಟಗೆರೆ ದೂರಿದ್ದಾರೆ.
ಸ್ವಾರಸ್ಯವೊಂದನ್ನು ಇಲ್ಲಿ ತಿಳಿಸಬೇಕಾಗಿದೆ. ಇಂಗ್ಲಿಷ್ ಶಬ್ದಗಳನ್ನು ಅನಗತ್ಯವಾಗಿ ಕನ್ನಡಿಸುವ ‘ಚಟ’ ದಶಕಗಳ ಹಿಂದೆಯೆ, ಆಚಾರ್ಯ ‘ಶ್ರೀ’ ಯವರ ಕಾಲದಲ್ಲೆ ಶುರುವಾಗಿತ್ತು! ಈ ಬಗೆಗೆ ‘ಶ್ರೀ’ ಯವರ ಸೂತ್ರವಿದು: ‘ರೈಲನ್ನು ರೈಲು ಎಂದು ಕರೆಯುವುದೇ ಉತ್ತಮ; ಹೊಗೆ ಬಂಡಿ ಎನ್ನುವುದು ಮಧ್ಯಮ; ಧೂಮಶಕಟ ಎನ್ನುವುದು ಅಧಮ!’ (‘ರೈಲು ಬಂತು’ ಎಂಬುದರ ಬದಲು ‘ಧೂಮಶಕಟ ಬಂತು, ಧೂಮಶಕಟ ಬಂತು’ ಎಂದು ಹೇಳಹೊರಟರೆ, ಉಚ್ಚರಿಸಿ ಮುಗಿಸುವಷ್ಟರಲ್ಲಿ ರೈಲು ಬಂದು ಹೋಗಿರುತ್ತದೆ!) ಉತ್ತಮ ನಿರ್ಧಾರವಿರಲಿ.