ನವದೆಹಲಿ (ಪಿಟಿಐ): ಮುಂಬೈ ದಾಳಿ ಆರೋಪಿಗಳಾದ ಹಫೀಜ್ ಸಯೀದ್್ ಹಾಗೂ ದಾವೂದ್ ಇಬ್ರಾಹಿಂನನ್ನು ಹಸ್ತಾಂತರಿಸುವಂತೆ ಭಾರತ ಗುರುವಾರ ಪಾಕಿಸ್ತಾನವನ್ನು ಕೇಳಿದೆ.
ಪೆಶಾವರ ಶಾಲೆ ಮೇಲಿನ ದಾಳಿ ಪ್ರಕರಣದಿಂದ ಪಾಠ ಕಲಿತು ಭಯೋತ್ಪಾದನೆ ನಿಗ್ರಹಕ್ಕೆ ಪಾಕ್ ದಿಟ್ಟ ಹೆಜ್ಜೆ ಇಡುತ್ತದೆ ಎಂದು ಆಶಿಸುವುದಾಗಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಿಳಿಸಿದರು.
ರಾಜನಾಥ್ ಆಕ್ರೋಶ
ಲಖ್ವಿಗೆ ಜಾಮೀನು ನೀಡಿರುವುದಕ್ಕೆ ಪಾಕಿಸ್ತಾನವನ್ನು ದೂಷಿಸಿರುವ ಗೃಹ ಸಚಿವ ರಾಜನಾಥ್ ಸಿಂಗ್, ‘ಈ ಪ್ರಕರಣ ನಿರ್ವಹಿಸುವಲ್ಲಿ ಪ್ರಾಸಿಕ್ಯೂಷನ್ ಎಲ್ಲೋ ಎಡವಿರಬೇಕು’ ಎಂದು ಹೇಳಿದ್ದಾರೆ.
‘ಪೆಶಾವರ ಸೇನಾ ಶಾಲೆ ಮೇಲೆ ದಾಳಿ ನಡೆದು ಕೇವಲ ಎರಡು ದಿನಗಳಲ್ಲಿಯೇ ಲಖ್ವಿಗೆ ಜಾಮೀನು ಸಿಕ್ಕಿರುವುದು ದುರದೃಷ್ಟಕರ. ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಪಾಕಿಸ್ತಾನ ಸರ್ಕಾರವು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಬೇಕು’ ಎಂದು ತರಾತುರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇಸ್ಲಾಮಾಬಾದ್ ವರದಿ: ಈ ಮಧ್ಯೆ ಪಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೌಸರ್್ ಅಬ್ಬಾಸ್ ಜೈದಿ ಲಖ್ವಿಗೆ ಜಾಮೀನು ನೀಡಿ ವಿಚಾರಣೆಯನ್ನು ಜನವರಿ ೭ರವರೆಗೆ ಮುಂದೂಡಿದ್ದಾರೆ.