<p><strong>ಬೆಂಗಳೂರು:</strong> ‘ಈ ನೆಲದ ಬಹುದೊಡ್ಡ ಬರಹಗಾರರನ್ನು ಕೇವಲ ಕನ್ನಡದ ಸನ್ನಿವೇಶದಲ್ಲಿಟ್ಟು ಮೌಲ್ಯಮಾಪನ ಮಾಡುತ್ತಿರುವುದು ವಿಮರ್ಶಾ ವಲಯದ ದೋಷ’ ಎಂದು ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.<br /> <br /> ಅಂಕಿತ ಪುಸ್ತಕ ಪ್ರಕಾಶನವು ನಗರದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಸಿ.ಎನ್. ರಾಮಚಂದ್ರನ್ ಅವರ ‘ ಇನ್ ಸರ್ಚ್ ಆಫ್ ಶಿವ–ಪುರ ಡಾ.ಚಂದ್ರಶೇಖರ ಕಂಬಾರ’ ಮತ್ತು ಚಂದ್ರಶೇಖರ ಕಂಬಾರ ಅವರ ‘ನಾದಗಳು ನುಡಿಯಾಗಲೇ’ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.<br /> ‘ಭಾರತೀಯ ಸಾಹಿತ್ಯ ಅಧ್ಯಯನದ ಕ್ರಮದಲ್ಲಿ ಕನ್ನಡದ ಎಲ್ಲ ಶ್ರೇಷ್ಠ ಸಾಹಿತಿಗಳು ಇರುವಂತೆ ವಿಮರ್ಶಾ ವಲಯ ನೋಡಿಕೊಳ್ಳಬೇಕು. ಸ್ವತಂತ್ರ ಭಾರತದ ಸಾಹಿತ್ಯಕ್ಕೆ ತಿರುವು ತಂದುಕೊಟ್ಟ ಸಾಹಿತಿಗಳಲ್ಲಿ ಕಂಬಾರರು ಒಬ್ಬರು’ ಎಂದು ಶ್ಲಾಘಿಸಿದರು.<br /> <br /> ಹಾಡು ಹೇಳಿದ ಕಂಬಾರರು: ಇದೇ ಸಂದರ್ಭದಲ್ಲಿ ಡಾ.ಚಂದ್ರಶೇಖರ ಕಂಬಾರ 77ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡರು. ‘ಬಿಸಿಲ ಕುದುರೆಯೇನೇರಿ ಹೋದ...ಕೈಮೀರಿ ಹೋದ’ ಎಂಬ ಸ್ವರಚಿತ ಕಾವ್ಯವನ್ನು ರಾಗಬದ್ಧವಾಗಿ ಹಾಡುತ್ತ ನೋಡುಗರಲ್ಲಿ ಬೆರಗು ಮೂಡಿಸಿದರು.<br /> ಸ್ವಾತಂತ್ರ್ಯ ಬಂದ ಮೇಲೆ ಸ್ವಾತಂತ್ರ್ಯ ಗೀತೆ: ನಂತರ ಮಾತನಾಡಿದ ಅವರು,<br /> <br /> ‘ಲಾವಣಿಕಾರರ ಪದ ಕೇಳುತ್ತಲೇ ಬೆಳೆದವನು ನಾನು. ಕೇಳುವ ಸಂಸ್ಕೃತಿಯಿಂದಲೇ ಕಾವ್ಯ ಕಟ್ಟುವ ಕಲೆಯನ್ನು ರೂಢಿಸಿಕೊಂಡೆ. ಸ್ವಾತಂತ್ರ್ಯ ಬಂದ ಮೇಲೆ ಸ್ವಾತಂತ್ರ್ಯದ ಬಗ್ಗೆ ಗೀತೆ ಬರೆದೆ. ಅದನ್ನೇ ಈಗ ಹಾಡುತ್ತೇನೆ’ ಎಂದು ಹಾಡಲು ಮುಂದಾದರು.<br /> <br /> ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ, ‘ಇಂಗ್ಲಿಷ್ ಪ್ರಾಧ್ಯಾಪಕರು ಪುಸ್ತಕಗಳನ್ನು ಅನುವಾದಿಸುವ ಮೂಲಕ ಕನ್ನಡದ ಪ್ರತಿಭಾವಂತ ಲೇಖಕರನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸುತ್ತಿದ್ದಾರೆ’ ಎಂದು ಹೇಳಿದರು.<br /> <br /> ‘ಪು.ತಿ.ನರಸಿಂಹಚಾರ್, ಕೆ.ಎಸ್. ನರಸಿಂಹಸ್ವಾಮಿ ಅಂತಹ ಶ್ರೇಷ್ಠ ಕವಿಗಳಿಗೂ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು. ಆದರೆ ಅವರ ಕೃತಿಗಳು ಇಂಗ್ಲಿಷ್ ಭಾಷೆಗೆ ತರ್ಜುಮೆಯಾಗದಿರುವುದೇ ಇದಕ್ಕೆ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ‘ನಾದ ಪ್ರಧಾನವಾದ ಕಂಬಾರರ ಕಾವ್ಯವನ್ನು ಅನುವಾದ ಮಾಡುವುದು ತುಸು ಕಷ್ಟ. ಪದ್ಯವನ್ನು ಭಾಷೆಯಲ್ಲಿ ಹಿಡಿಯಬಹುದು. ಆದರೆ, ಅದರ ಜತೆಗೆ ಬೆಸೆದುಕೊಂಡಿರುವ ಲಯವನ್ನು ಹಿಡಿಯಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಈ ನೆಲದ ಬಹುದೊಡ್ಡ ಬರಹಗಾರರನ್ನು ಕೇವಲ ಕನ್ನಡದ ಸನ್ನಿವೇಶದಲ್ಲಿಟ್ಟು ಮೌಲ್ಯಮಾಪನ ಮಾಡುತ್ತಿರುವುದು ವಿಮರ್ಶಾ ವಲಯದ ದೋಷ’ ಎಂದು ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.<br /> <br /> ಅಂಕಿತ ಪುಸ್ತಕ ಪ್ರಕಾಶನವು ನಗರದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಸಿ.ಎನ್. ರಾಮಚಂದ್ರನ್ ಅವರ ‘ ಇನ್ ಸರ್ಚ್ ಆಫ್ ಶಿವ–ಪುರ ಡಾ.ಚಂದ್ರಶೇಖರ ಕಂಬಾರ’ ಮತ್ತು ಚಂದ್ರಶೇಖರ ಕಂಬಾರ ಅವರ ‘ನಾದಗಳು ನುಡಿಯಾಗಲೇ’ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.<br /> ‘ಭಾರತೀಯ ಸಾಹಿತ್ಯ ಅಧ್ಯಯನದ ಕ್ರಮದಲ್ಲಿ ಕನ್ನಡದ ಎಲ್ಲ ಶ್ರೇಷ್ಠ ಸಾಹಿತಿಗಳು ಇರುವಂತೆ ವಿಮರ್ಶಾ ವಲಯ ನೋಡಿಕೊಳ್ಳಬೇಕು. ಸ್ವತಂತ್ರ ಭಾರತದ ಸಾಹಿತ್ಯಕ್ಕೆ ತಿರುವು ತಂದುಕೊಟ್ಟ ಸಾಹಿತಿಗಳಲ್ಲಿ ಕಂಬಾರರು ಒಬ್ಬರು’ ಎಂದು ಶ್ಲಾಘಿಸಿದರು.<br /> <br /> ಹಾಡು ಹೇಳಿದ ಕಂಬಾರರು: ಇದೇ ಸಂದರ್ಭದಲ್ಲಿ ಡಾ.ಚಂದ್ರಶೇಖರ ಕಂಬಾರ 77ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡರು. ‘ಬಿಸಿಲ ಕುದುರೆಯೇನೇರಿ ಹೋದ...ಕೈಮೀರಿ ಹೋದ’ ಎಂಬ ಸ್ವರಚಿತ ಕಾವ್ಯವನ್ನು ರಾಗಬದ್ಧವಾಗಿ ಹಾಡುತ್ತ ನೋಡುಗರಲ್ಲಿ ಬೆರಗು ಮೂಡಿಸಿದರು.<br /> ಸ್ವಾತಂತ್ರ್ಯ ಬಂದ ಮೇಲೆ ಸ್ವಾತಂತ್ರ್ಯ ಗೀತೆ: ನಂತರ ಮಾತನಾಡಿದ ಅವರು,<br /> <br /> ‘ಲಾವಣಿಕಾರರ ಪದ ಕೇಳುತ್ತಲೇ ಬೆಳೆದವನು ನಾನು. ಕೇಳುವ ಸಂಸ್ಕೃತಿಯಿಂದಲೇ ಕಾವ್ಯ ಕಟ್ಟುವ ಕಲೆಯನ್ನು ರೂಢಿಸಿಕೊಂಡೆ. ಸ್ವಾತಂತ್ರ್ಯ ಬಂದ ಮೇಲೆ ಸ್ವಾತಂತ್ರ್ಯದ ಬಗ್ಗೆ ಗೀತೆ ಬರೆದೆ. ಅದನ್ನೇ ಈಗ ಹಾಡುತ್ತೇನೆ’ ಎಂದು ಹಾಡಲು ಮುಂದಾದರು.<br /> <br /> ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ, ‘ಇಂಗ್ಲಿಷ್ ಪ್ರಾಧ್ಯಾಪಕರು ಪುಸ್ತಕಗಳನ್ನು ಅನುವಾದಿಸುವ ಮೂಲಕ ಕನ್ನಡದ ಪ್ರತಿಭಾವಂತ ಲೇಖಕರನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸುತ್ತಿದ್ದಾರೆ’ ಎಂದು ಹೇಳಿದರು.<br /> <br /> ‘ಪು.ತಿ.ನರಸಿಂಹಚಾರ್, ಕೆ.ಎಸ್. ನರಸಿಂಹಸ್ವಾಮಿ ಅಂತಹ ಶ್ರೇಷ್ಠ ಕವಿಗಳಿಗೂ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು. ಆದರೆ ಅವರ ಕೃತಿಗಳು ಇಂಗ್ಲಿಷ್ ಭಾಷೆಗೆ ತರ್ಜುಮೆಯಾಗದಿರುವುದೇ ಇದಕ್ಕೆ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ‘ನಾದ ಪ್ರಧಾನವಾದ ಕಂಬಾರರ ಕಾವ್ಯವನ್ನು ಅನುವಾದ ಮಾಡುವುದು ತುಸು ಕಷ್ಟ. ಪದ್ಯವನ್ನು ಭಾಷೆಯಲ್ಲಿ ಹಿಡಿಯಬಹುದು. ಆದರೆ, ಅದರ ಜತೆಗೆ ಬೆಸೆದುಕೊಂಡಿರುವ ಲಯವನ್ನು ಹಿಡಿಯಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>