ಬೆಂಗಳೂರು: ‘ಸೌರ ಶಕ್ತಿ ಉತ್ಪಾದನೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಶನಿವಾರ ಇಲ್ಲಿ ಸ್ಪಷ್ಟಪಡಿಸಿದರು.
ರೈತ ಮುಖಂಡರ ಜತೆ ಮಾತುಕತೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ‘ಹಗರಣದಲ್ಲಿ ಸಿಲುಕಿಕೊಳ್ಳಲು ನಾನು ಮೂರ್ಖ ಅಲ್ಲ. ಇಷ್ಟಕ್ಕೂ ನಾನು ನನ್ನ ಸಂಬಂಧಿಕರಿಗಾಗಲಿ, ಹಿಂಬಾಲಕರಿಗಾಗಲಿ ಟೆಂಡರ್ ಕೊಟ್ಟಿಲ್ಲ. ಎಲ್ಲ ಟೆಂಡರ್ಗಳೂ ವೃತ್ತಿಯಲ್ಲಿ ಕೃಷಿಕರಾಗಿರುವ ಭೂ ಮಾಲೀಕರಿಗೇ ಸಿಕ್ಕಿವೆ. ಏನೂ ಬೆಳೆಯಲು ಸಾಧ್ಯವಾಗದ ಭೂಮಿಯನ್ನು ಈ ರೀತಿಯೂ ಉಪಯೋಗಿಸಬಹುದು ಎಂಬುದನ್ನು ತೋರಿಸುವ ಸಲುವಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ಅವರು ಹೇಳಿದರು.
‘ನೆಮ್ಮದಿ’ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಿದ ಬಹುತೇಕರಿಗೆ ಟೆಂಡರ್ ಸಿಕ್ಕಿದೆ. ಸಚಿವ ಸಂಪುಟದ ಸಹೋದ್ಯೋಗಿಗಳಿಗೂ ಟೆಂಡರ್ನಲ್ಲಿ ಭಾಗವಹಿಸುವಂತೆ ಕೋರಿದ್ದೆ. ಒಬ್ಬ ಬಿಜೆಪಿ ಸಂಸದ ಮತ್ತು ಒಬ್ಬ ಕಾಂಗ್ರೆಸ್ ಶಾಸಕ ಬಿಟ್ಟರೆ ಬೇರೆ ಯಾರೂ ಟೆಂಡರ್ನಲ್ಲಿ ಭಾಗವಹಿಸಿಲ್ಲ’ ಎಂದರು.