ನವದೆಹಲಿ(ಪಿಟಿಐ): ‘ಹಿಂದೂ ಭಯೋತ್ಪಾದನೆ’ ಎಂಬ ಪರಿಕಲ್ಪನೆಯನ್ನು ಹಿಂದಿನ ಸರ್ಕಾರ ದಾಳವಾಗಿ ಬಳಸಿದ್ದರಿಂದ ಭಯೋತ್ಪಾದನೆ ತಡೆ ಹಾಗೂ ಅದರ ವಿರುದ್ಧದ ಹೋರಾಟವನ್ನು ದಿಕ್ಕುತಪ್ಪಿಸಿ ದುರ್ಬಲಗೊಳಿಸಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡಿದೆ.
ಪಂಜಾಬ್ ನ ಗುರುದಾಸಪುರದಲ್ಲಿನಡೆದ ಉಗ್ರರ ದಾಳಿ ಪ್ರಕರಣ ಕುರಿತು ಲೋಕಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು ನೀಡಿದ ಹೇಳಿಕೆಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಶುಕ್ರವಾರ ಗದ್ದಲ ಎಬ್ಬಿಸಿ, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದವು.
ಈ ವೇಳೆ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಭಯೋತ್ಪಾದನೆ ರಾಷ್ಟ್ರ ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ಭಯೋತ್ಪಾದನೆ ವಿರುದ್ಧ ಹೋರಾಡುವ ವೇಳೆ ಇಂಥ ಪದಗಳ ಬಳಕೆಯಿಂದ ಅಡ್ಡಿಯಾಗುತ್ತದೆ ಎಂದು ಹೇಳಿದ್ದಾರೆ.