ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

127 ಮರಳು ಲಾರಿ ವಶ

Last Updated 27 ನವೆಂಬರ್ 2014, 19:46 IST
ಅಕ್ಷರ ಗಾತ್ರ

ಬೆಂಗಳೂರು:  ನಗರ ಜಿಲ್ಲಾಡಳಿತ ಆನೇ ಕಲ್‌ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ದಾಳಿ ನಡೆಸಿ 26 ಅಕ್ರಮ ಮರಳು ಅಡ್ಡೆ ನಾಶಪಡಿಸಿದೆ. ಅಕ್ರಮ­ವಾಗಿ ಮರಳು ಸಾಗಣೆ ಮಾಡುತ್ತಿದ್ದ 127 ಲಾರಿಗಳನ್ನು ವಶಪಡಿಸಿಕೊಂಡಿದೆ.

ಸಾರಿಗೆ ಇಲಾಖೆಯ ಆಯುಕ್ತ ಡಾ.ರಾಮೇಗೌಡ, ನಗರ ಜಿಲ್ಲಾ­ಧಿಕಾರಿ ವಿ.ಶಂಕರ್‌, ಬೆಂಗ­ಳೂರು ಗ್ರಾಮಾಂತರ ಎಸ್ಪಿ ರಮೇಶ್‌ ಬಾನೋಟ್‌, ತಹ­ಶೀಲ್ದಾರ್‌ ಅನಿಲ್‌ ಕುಮಾರ್‌ ಅವರ ನೇತೃತ್ವದಲ್ಲಿ ಕಂದಾಯ, ಪೊಲೀಸ್‌, ಗಣಿ, ಸಾರಿಗೆ ಇಲಾಖೆಯ ಅಧಿಕಾರಿಗಳು ಏಕಕಾಲದಲ್ಲಿ ಅತ್ತಿಬೆಲೆ, ಸರ್ಜಾಪುರ, ಬನ್ನೇರುಘಟ್ಟ ಹಾಗೂ ಆನೇಕಲ್‌ನಲ್ಲಿ ದಾಳಿ ನಡೆಸಿ ಅಕ್ರಮ­ವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ 127 ಲಾರಿ­ಗಳನ್ನು ಮತ್ತು ದಂಧೆಗೆ ಬಳಸುತ್ತಿದ್ದ ಉಪಕರಣಗಳನ್ನು ವಶಪಡಿಸಿ­ಕೊಂಡಿ­ದ್ದಾರೆ.

ಫಿಲ್ಟರ್‌ ಮರಳು ತಯಾರಿ­ಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಇಂಡ್ಲವಾಡಿ, ರಾಗಿಹಳ್ಳಿ ಮತ್ತಿತರ ಅಕ್ರಮ ಮರಳು ಫಿಲ್ಟರ್‌ ಅಡ್ಡೆಗಳ ಮೇಲೆ ದಾಳಿ ನಡೆಸಿ 26 ಅಡ್ಡೆ ನೆಲಸಮಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT