ಹನಾಯ್, ವಿಯೆಟ್ನಾಂ(ಪಿಟಿಐ): ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಇಲ್ಲಿ ಆಗ್ನೇಯ ಮತ್ತು ನೈರುತ್ಯ ಏಷ್ಯಾ ದೇಶಗಳಲ್ಲಿರುವ 15 ಭಾರತೀಯ ರಾಜತಾಂತ್ರಿಕ ಕಚೇರಿ ಮುಖ್ಯಸ್ಥರ ಸಭೆ ನಡೆಸಿ, ಹೊಸ ಬಿಜೆಪಿ ಸರ್ಕಾರದ ವಿದೇಶಾಂಗ ನೀತಿಗಳ ಬಗ್ಗೆ ಚರ್ಚಿಸಿದರು.
ಕೇವಲ ರಾಷ್ಟ್ರಗಳ ಕಡೆ ನೋಡದೆ, ಅವುಗಳ ಜತೆ ಸಂಬಂಧ ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವಂತೆ ಅವರು ರಾಜತಾಂತ್ರಿಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಯುದ್ಧ ತಂತ್ರಗಾರಿಕೆಯಲ್ಲಿ ಅತ್ಯಂತ ಮಹತ್ವದ ಈ ಪ್ರಾಂತ್ಯದಲ್ಲಿ ಭದ್ರತಾ ವ್ಯವಸ್ಥೆ, ಚೀನಾದ ಉಪಸ್ಥಿತಿ, ಭಾರತದ ಅಭಿವೃದ್ಧಿಗೆ ಅವಕಾಶ ಮತ್ತಿತರ ವಿಷಯಗಳ ಬಗ್ಗೆಯೂ ಸಮಾಲೋಚಿಸಿದರು.
ಈ ಮಧ್ಯೆ, ಮುಂದಿನ ತಿಂಗಳು ವಿಯೆಟ್ನಾಂಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಎರಡೂ ದೇಶಗಳ ನಡುವೆ ರಕ್ಷಣೆ, ವ್ಯಾಪಾರ, ಸಂಸ್ಕೃತಿ ಇನ್ನಿತರ ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆ ಇದೆ.