ಬೆಂಗಳೂರು: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಆಯ್ಕೆಗಾಗಿ ರಚಿಸಲಾಗಿರುವ ಶೋಧನಾ ಸಮಿತಿಯು ಮೂವರ ಹೆಸರುಗಳನ್ನು ಉನ್ನತ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ.
ಬೆಂಗಳೂರಿನಲ್ಲಿ ಮಂಗಳವಾರ ಕೆ.ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಕೆನಡಾದ ಮ್ಯಾನಿಟೋವಾ ವಿಶ್ವವಿದ್ಯಾಲಯದ ಡಾ.ಶಿವಲಿಂಗಪ್ಪ ಹಳ್ಳಿ, ಮೈಸೂರು ವಿಶ್ವವಿದ್ಯಾಲಯದ ಪ್ರೊ.ಶಿವಲಿಂಗಯ್ಯ ಹಾಗೂ ಧಾರವಾಡದ ಕರ್ನಾಟಕ ಇನ್ಸ್ಟಿಟ್ಯೂಟ್ ಫಾರ್ ಡಿಎನ್ಎ ರಿಸರ್ಚ್ನ ಡಾ.ಪಿ.ಬಿ.ಗಾಯಿ ಅವರ ಹೆಸರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಗೊತ್ತಾಗಿದೆ.
ಸಮಿತಿ ಸದಸ್ಯರಾದ ಡಾ.ಜೆ.ಎಚ್.ಕುಲಕರ್ಣಿ, ಡಾ. ಸತೀಶ ಜಿಗಜಿನ್ನಿ ಮತ್ತು ಪ್ರೊ.ವಿಶ್ರಾಮ ಜಮಾದಾರ ಸಭೆಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.