ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿವಿ ಕುಲಪತಿ ಆಯ್ಕೆಗೆ ಮೂವರ ಹೆಸರು

Last Updated 10 ಮಾರ್ಚ್ 2015, 20:27 IST
ಅಕ್ಷರ ಗಾತ್ರ

ಬೆಂಗಳೂರು: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಆಯ್ಕೆಗಾಗಿ ರಚಿಸ­ಲಾಗಿರುವ ಶೋಧನಾ ಸಮಿತಿಯು ಮೂವರ ಹೆಸರುಗಳನ್ನು ಉನ್ನತ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ.

ಬೆಂಗಳೂರಿನಲ್ಲಿ ಮಂಗಳವಾರ ಕೆ.ಕಸ್ತೂರಿ ರಂಗನ್‌ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಕೆನಡಾದ ಮ್ಯಾನಿಟೋವಾ ವಿಶ್ವವಿದ್ಯಾಲಯದ ಡಾ.ಶಿವಲಿಂಗಪ್ಪ ಹಳ್ಳಿ, ಮೈಸೂರು ವಿಶ್ವವಿದ್ಯಾಲಯದ ಪ್ರೊ.ಶಿವ­ಲಿಂಗಯ್ಯ ಹಾಗೂ ಧಾರವಾಡದ ಕರ್ನಾಟಕ ಇನ್‌ಸ್ಟಿಟ್ಯೂಟ್‌ ಫಾರ್‌ ಡಿಎನ್‌ಎ ರಿಸರ್ಚ್‌ನ ಡಾ.ಪಿ.ಬಿ.­ಗಾಯಿ ಅವರ ಹೆಸರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಗೊತ್ತಾಗಿದೆ.
ಸಮಿತಿ ಸದಸ್ಯರಾದ ಡಾ.ಜೆ.ಎಚ್.­ಕುಲಕರ್ಣಿ, ಡಾ. ಸತೀಶ ಜಿಗಜಿನ್ನಿ ಮತ್ತು ಪ್ರೊ.ವಿಶ್ರಾಮ ಜಮಾದಾರ ಸಭೆ­ಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT