<p><strong>ಬೆಂಗಳೂರು:</strong> ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಕಲಾಕೃತಿಗಳ ಪ್ರದರ್ಶನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಎಜಿ (ವೆಂಕಟಪ್ಪ ಆರ್ಟ್ ಗ್ಯಾಲರಿ) ಫೋರಂ ವತಿಯಿಂದ ಸೋಮವಾರ ‘ಕಲಾ ಮ್ಯಾರಥಾನ್’ ಆಯೋಜಿಸಲಾಗಿತ್ತು.<br /> <br /> 40 ಕಲಾವಿದರು ಗ್ಯಾಲರಿಯ ಆವರಣದಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು. ಪರಿಸರ ಸಂರಕ್ಷಣೆ, ನೀರಿನ ಸದ್ಬಳಕೆ, ಪ್ರಾಣಿ–ಮನುಷ್ಯನ ಸಂಘರ್ಷ, ಕೊಡಗಿನ ಮಹಿಳೆ ಮೊದಲಾದ ವಿಷಯಗಳನ್ನು ಇಟ್ಟುಕೊಂಡು ರಚಿಸಿದ ಕಲಾಕೃತಿಗಳು ಗಮನ ಸೆಳೆದವು.<br /> <br /> ‘ಓಟದಲ್ಲಿ ಮ್ಯಾರಥಾನ್ ಆಯೋಜನೆ ಮಾಡುವುದು ಸಹಜ. ಆದರೆ, ಇದೇ ಮೊದಲ ಬಾರಿಗೆ ಕಲಾ ಪ್ರಕಾರದಲ್ಲಿ ಮ್ಯಾರಥಾನ್ ಆಯೋಜಿಸಿದ್ದೇವೆ. ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿದೆ’ ಎಂದು ವಿಎಜಿ ಫೋರಂ ಸದಸ್ಯೆ ಸುರೇಖಾ ಹೇಳಿದರು.<br /> <br /> ಕಲಾವಿದ ಸುರೇಶ್ ಕುಮಾರ್, ‘ಖಾಸಗಿ ಕಲಾ ಗ್ಯಾಲರಿಗಳಲ್ಲಿ ಕಲಾಕೃತಿಗಳ ಪ್ರದರ್ಶನಕ್ಕೆ ದುಬಾರಿ ಶುಲ್ಕ ನೀಡಬೇಕು. ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನ ಮಾಡಲು ದಿನಕ್ಕೆ ಕೇವಲ ₹ 500 ಶುಲ್ಕ ಪಡೆಯಲಾಗುತ್ತದೆ. ಹೀಗಾಗಿ ಯುವ ಕಲಾವಿದರು ಹೆಚ್ಚು ಹೆಚ್ಚು ಪ್ರದರ್ಶನಗಳನ್ನು ಆಯೋಜಿಸಬೇಕು’ ಎಂದು ಹೇಳಿದರು.<br /> <br /> ಕಲಾವಿದೆ ಸಾರಾ ಜೋಸೆಫ್, ನಮ್ಮ ಕಾಫಿ ತೋಟದಲ್ಲಿ 85 ವರ್ಷದ ವೃದ್ಧೆಯೊಬ್ಬರು ಕೆಲಸ ಮಾಡುತ್ತಾರೆ. ಆ ಇಳಿವಯಸ್ಸಿನಲ್ಲೂ ಕೆಲಸ ಮಾಡಬೇಕು ಎನ್ನುವ ಅವರ ತುಡಿತ, ಹಂಬಲ, ಚೈತನ್ಯವನ್ನು ನೋಡಿ ಇಷ್ಟವಾಯಿತು. ಆದ್ದರಿಂದ ಅವರ ನೈಜ ಚಿತ್ರವನ್ನು ರಚಿಸಿದೆ’ ಎಂದರು. ಕಲಾವಿದ ಬಿ.ಎಚ್.ಲೋಕೇಶ್ ಅವರು ಜನಪದ ಕಲೆ, ಸಂಪ್ರದಾಯ, ಆಚಾರ ವಿಚಾರಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ಪ್ರದರ್ಶಿಸಿದ್ದರು.<br /> <br /> ಕಲಾವಿದೆ ಸ್ಮಿತಾ ಕರಿಯಪ್ಪ ಅವರು ನೀಲಿ ಡೇನಿಮ್ ಜೀನ್ಸ್ನಲ್ಲಿ ಅಕ್ಷರಗಳನ್ನು ಹೋಲಿಗೆ ಹಾಕಿದ್ದ ಕಲಾಕೃತಿಗಳನ್ನು ಪ್ರದರ್ಶನ ಮಾಡಿದರು. ಕಲಾ ಮ್ಯಾರಥಾನ್ ಸೋಮವಾರದಿಂದ ಬುಧವಾರದವರೆಗೆ (ಮೇ 11) ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ನಡೆಯಲಿದೆ. ಮೂರು ದಿನಗಳಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ವಿವಿಧ ಕಲಾಕೃತಿಗಳನ್ನು ಪ್ರದರ್ಶನ ಮಾಡಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಕಲಾಕೃತಿಗಳ ಪ್ರದರ್ಶನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಎಜಿ (ವೆಂಕಟಪ್ಪ ಆರ್ಟ್ ಗ್ಯಾಲರಿ) ಫೋರಂ ವತಿಯಿಂದ ಸೋಮವಾರ ‘ಕಲಾ ಮ್ಯಾರಥಾನ್’ ಆಯೋಜಿಸಲಾಗಿತ್ತು.<br /> <br /> 40 ಕಲಾವಿದರು ಗ್ಯಾಲರಿಯ ಆವರಣದಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು. ಪರಿಸರ ಸಂರಕ್ಷಣೆ, ನೀರಿನ ಸದ್ಬಳಕೆ, ಪ್ರಾಣಿ–ಮನುಷ್ಯನ ಸಂಘರ್ಷ, ಕೊಡಗಿನ ಮಹಿಳೆ ಮೊದಲಾದ ವಿಷಯಗಳನ್ನು ಇಟ್ಟುಕೊಂಡು ರಚಿಸಿದ ಕಲಾಕೃತಿಗಳು ಗಮನ ಸೆಳೆದವು.<br /> <br /> ‘ಓಟದಲ್ಲಿ ಮ್ಯಾರಥಾನ್ ಆಯೋಜನೆ ಮಾಡುವುದು ಸಹಜ. ಆದರೆ, ಇದೇ ಮೊದಲ ಬಾರಿಗೆ ಕಲಾ ಪ್ರಕಾರದಲ್ಲಿ ಮ್ಯಾರಥಾನ್ ಆಯೋಜಿಸಿದ್ದೇವೆ. ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿದೆ’ ಎಂದು ವಿಎಜಿ ಫೋರಂ ಸದಸ್ಯೆ ಸುರೇಖಾ ಹೇಳಿದರು.<br /> <br /> ಕಲಾವಿದ ಸುರೇಶ್ ಕುಮಾರ್, ‘ಖಾಸಗಿ ಕಲಾ ಗ್ಯಾಲರಿಗಳಲ್ಲಿ ಕಲಾಕೃತಿಗಳ ಪ್ರದರ್ಶನಕ್ಕೆ ದುಬಾರಿ ಶುಲ್ಕ ನೀಡಬೇಕು. ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನ ಮಾಡಲು ದಿನಕ್ಕೆ ಕೇವಲ ₹ 500 ಶುಲ್ಕ ಪಡೆಯಲಾಗುತ್ತದೆ. ಹೀಗಾಗಿ ಯುವ ಕಲಾವಿದರು ಹೆಚ್ಚು ಹೆಚ್ಚು ಪ್ರದರ್ಶನಗಳನ್ನು ಆಯೋಜಿಸಬೇಕು’ ಎಂದು ಹೇಳಿದರು.<br /> <br /> ಕಲಾವಿದೆ ಸಾರಾ ಜೋಸೆಫ್, ನಮ್ಮ ಕಾಫಿ ತೋಟದಲ್ಲಿ 85 ವರ್ಷದ ವೃದ್ಧೆಯೊಬ್ಬರು ಕೆಲಸ ಮಾಡುತ್ತಾರೆ. ಆ ಇಳಿವಯಸ್ಸಿನಲ್ಲೂ ಕೆಲಸ ಮಾಡಬೇಕು ಎನ್ನುವ ಅವರ ತುಡಿತ, ಹಂಬಲ, ಚೈತನ್ಯವನ್ನು ನೋಡಿ ಇಷ್ಟವಾಯಿತು. ಆದ್ದರಿಂದ ಅವರ ನೈಜ ಚಿತ್ರವನ್ನು ರಚಿಸಿದೆ’ ಎಂದರು. ಕಲಾವಿದ ಬಿ.ಎಚ್.ಲೋಕೇಶ್ ಅವರು ಜನಪದ ಕಲೆ, ಸಂಪ್ರದಾಯ, ಆಚಾರ ವಿಚಾರಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ಪ್ರದರ್ಶಿಸಿದ್ದರು.<br /> <br /> ಕಲಾವಿದೆ ಸ್ಮಿತಾ ಕರಿಯಪ್ಪ ಅವರು ನೀಲಿ ಡೇನಿಮ್ ಜೀನ್ಸ್ನಲ್ಲಿ ಅಕ್ಷರಗಳನ್ನು ಹೋಲಿಗೆ ಹಾಕಿದ್ದ ಕಲಾಕೃತಿಗಳನ್ನು ಪ್ರದರ್ಶನ ಮಾಡಿದರು. ಕಲಾ ಮ್ಯಾರಥಾನ್ ಸೋಮವಾರದಿಂದ ಬುಧವಾರದವರೆಗೆ (ಮೇ 11) ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ನಡೆಯಲಿದೆ. ಮೂರು ದಿನಗಳಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ವಿವಿಧ ಕಲಾಕೃತಿಗಳನ್ನು ಪ್ರದರ್ಶನ ಮಾಡಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>