ಬೆಂಗಳೂರು: ರಾಜ್ಯ ಸರ್ಕಾರ ನೀಡುವ 2014ರ ಸಾಲಿನ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ‘ಪ್ರೊ ಕೆ.ಜಿ. ಕುಂದಣಗಾರ ಗಡಿನಾಡ ಪ್ರಶಸ್ತಿಗೆ’ ಬೀದರ್ ಜಿಲ್ಲೆಯ ಶಾಂತಪ್ಪ ಶರಣಪ್ಪ ದೇವರಾಯ ಅವರು ಆಯ್ಕೆಯಾಗಿದ್ದಾರೆ.
‘ಜಕಣಾಚಾರಿ ಪ್ರಶಸ್ತಿಗೆ’ ಬಾಗಲಕೋಟೆ ಜಿಲ್ಲೆಯ ಷಣ್ಮುಖಪ್ಪ ಕಾಶಪ್ಪ ಯರಕದ, ‘ಜಾನಪದಶ್ರೀ ಪ್ರಶಸ್ತಿಗೆ’ ತುಮಕೂರು ಜಿಲ್ಲೆಯ ಕಲ್ಮನೆ ಎ.ಎಸ್. ನಂಜಪ್ಪ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ₨ 3 ಲಕ್ಷ ನಗದು ಒಳಗೊಂಡಿದೆ.