ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾಂಡ ಇನ್ನೂ ನಿಗೂಢ’

Last Updated 3 ನವೆಂಬರ್ 2014, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಶ್ವದ ಉಗಮದ ಬಗ್ಗೆ ಮ್ಯಾಪಿಂಗ್‌ ಮಾಡುವ ಹೊಸ ವಿಧಾನಗಳು ಬರಲಿವೆ. ಇದರಿಂದ ಈ ವಿಶ್ವದ ಬಗ್ಗೆ ಇನ್ನಷ್ಟು ರೋಚಕ ವಿಷಯಗಳು ಗೊತ್ತಾಗಲಿವೆ. ಆ ಬಳಿಕವೂ ಬ್ರಹ್ಮಾಂಡ ನಿಗೂಢವಾಗಿಯೇ ಉಳಿಯಲಿದೆ’ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಜಾರ್ಜ್‌ ಎಫ್‌. ಸ್ಮೂಥ್‌ ಅಭಿಪ್ರಾಯಪಟ್ಟರು.

ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ನೊಬೆಲ್‌ ಮ್ಯೂಸಿಯಂ ವತಿಯಿಂದ ನಗರದಲ್ಲಿ ಸೋಮವಾರ ಆಯೋ­ಜಿ­ಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನ ವಿವಿಧ ಭಾಗಗಳ ವಿಜ್ಞಾನಿಗಳು ಮತ್ತು ಸಾರ್ವ­ಜನಿಕ­ರೊಂದಿಗೆ ನೊಬೆಲ್‌ ಪ್ರಶಸ್ತಿ ಪುರಸ್ಕೃತರು ತಮ್ಮ ಆಲೋಚನೆ­ಗ­ಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಳ್ಳುವ ಉದ್ದೇಶದಿಂದ ಮ್ಯೂಸಿಯಂ ಈ ಉಪನ್ಯಾಸ ಸರಣಿಯನ್ನು ಆಯೋಜಿಸಿದೆ.

ಡಾ.ಸ್ಮೂಥ್‌ ಅವರು ಭಾರತದಲ್ಲಿ ಇನ್ನು ಮೂರು ಕಡೆಗಳಲ್ಲಿ ಉಪನ್ಯಾಸ ನೀಡುವರು. ಮ್ಯೂಸಿಯಂ ಮೊದಲ ಬಾರಿಗೆ ಬಹು ನಗರಗಳಲ್ಲಿ ಉಪನ್ಯಾಸ ಕಾರ್ಯ­ಕ್ರಮ ಹಮ್ಮಿಕೊಂಡಿದೆ. ಉಪನ್ಯಾಸದಲ್ಲಿ ಸ್ಮೂಥ್‌ ಅವರು ವಿಶ್ವದ ಉಗಮದ ಕುರಿತ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT