ಸಭಾಧ್ಯಕ್ಷರಾದ ಸುಮಿತ್ರಾ ಮಹಾಜನ್ ಅವರು ಭೂಮಸೂದೆ ಮಂಡಿಸಲು ಅನುವು ನೀಡುತ್ತಿದಂತೆ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿ ಸದನದಿಂದ ಹೊರನಡೆದವು.
ಕಾಂಗ್ರೆಸ್, ಟಿಎಂಸಿ, ಬಿಎಸ್ಪಿ, ಎಸ್ಪಿ ಮತ್ತು ಎಡ ಪಕ್ಷಗಳು ಇದು ರೈತ ವಿರೋಧಿ ಸರ್ಕಾರ ಎಂದು ಘೋಷಣೆ ಕೂಗುತ್ತ ಸದನದಿಂದ ಹೊರ ನಡೆದವು.
ಮತ್ತೆ ಸದನ ಸೇರಿದ ಬಳಿಕ ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಬಿರೇಂದ್ರ ಸಿಂಗ್ ವಿರೊಧ ಪಕ್ಷಗಳು ಆರೋಪಿಸಿದಂತೆ ಇದು ರೈತರ ವಿರೋಧಿಮಸೂದೆಯಲ್ಲ, ಭೂಮಿ ಕಳೆದು ಕೊಳ್ಳುವ ರೈತರಿಗೆ ಮಾರುಕಟ್ಟೆ ದರದಲ್ಲಿ ಪರಿಹಾರ, ಪಾರದರ್ಶಕವಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದರ ಜೊತೆಗೆ ರೈತರಿಗೆ ಪುನರ್ವಸತಿಯನ್ನು ಕಲ್ಪಿಸಲಾಗುತ್ತದೆ ಎಂದು ಸದನಕ್ಕೆ ವಿವರಿಸಿದರು.
ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಮಾತನಾಡಿ ಇಂದು ಭೂಮಸೂದೆಯನ್ನು ಪಾಸು ಮಾಡುತ್ತಿಲ್ಲ, ಸದನಕ್ಕೆ ಪರಿಚಯಿಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.