ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನ: ಬಗೆಹರಿಯದ ಗೊಂದಲ!

Last Updated 13 ಅಕ್ಟೋಬರ್ 2014, 19:47 IST
ಅಕ್ಷರ ಗಾತ್ರ

ಹಾವೇರಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ನಿಗದಿಯ ಗೊಂದಲ ಮುಂದುವರಿದಿದ್ದು, ಜಿಲ್ಲೆ­ಯಲ್ಲಿ ಚಟುವಟಿಕೆಗಳು ಮತ್ತೆ ಚಿಗುರೊಡೆದಿವೆ.

‘ಹಾವೇರಿ ಜಿಲ್ಲೆಯಲ್ಲೇ ಈ ಬಾರಿ ಸಮ್ಮೇಳನ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಮತ್ತೊಮ್ಮೆ ಘೋಷಿಸುವ ಮೂಲಕ ಗೊಂದಲ ಜೀವಂತವಾಗಿ ಉಳಿದಿದೆ. ಇನ್ನೊಂದೆಡೆ ಜಿಲ್ಲೆಯ ಸಾಹಿತ್ಯಾ­ಭಿಮಾನಿಗಳ ಆಶಯಕ್ಕೆ ಮರುಜೀವ ಸಿಕ್ಕಿದೆ.

ಸ್ಥಳ ನಿರ್ಣಯಿಸುವ ಬಗ್ಗೆ ಹಾವೇರಿ ಮತ್ತು ರಾಣೆಬೆನ್ನೂರು ತಾಲ್ಲೂಕು ಕೇಂದ್ರದ ಮಧ್ಯ ಸ್ಥಳವಾದ ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರಿನಲ್ಲಿ ಇದೇ 26ರಂದು ಸಭೆ ಕರೆಯಲಾಗಿದೆ. ಇಲ್ಲಿ ಅಂತಿಮ ನಿರ್ಣಯ ಕೈಗೊಳ್ಳ­ಲಾಗುವುದು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT