<p><strong>ಬೆಂಗಳೂರು: </strong>ಸಂಶೋಧಕ ಪ್ರೊ. ಷ. ಶೆಟ್ಟರ್, ವಿಮರ್ಶಕಿ ಬಿ.ಎನ್. ಸುಮಿತ್ರಾ ಬಾಯಿ ಹಾಗೂ ಲೇಖಕ ಡಾ. ನಾ. ಮೊಗಸಾಲೆ ಅವರಿಗೆ 2015ನೇ ಸಾಲಿನ ‘ಮಾಸ್ತಿ’ ಪ್ರಶಸ್ತಿಯನ್ನು ಶನಿವಾರ ನಗರದಲ್ಲಿ ಪ್ರದಾನ ಮಾಡಲಾಯಿತು.<br /> <br /> ಈ ಮೂವರಿಗೆ ಕ್ರಮವಾಗಿ ಸಂಶೋಧನೆ, ವಿಮರ್ಶೆ ಹಾಗೂ ಸೃಜನಶೀಲ ಬರವಣಿಗೆಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿಯು ತಲಾ ₹ 25 ಸಾವಿರ ನಗದು ಒಳಗೊಂಡಿದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ ಪ್ರಶಸ್ತಿ ಸಮಿತಿ ಮತ್ತು ಡಾ. ಮಾಸ್ತಿ ಟ್ರಸ್ಟ್ ಕೋಲಾರ ಜಂಟಿಯಾಗಿ ಈ ಪ್ರಶಸ್ತಿ ನೀಡಿವೆ.<br /> <br /> ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ಷ. ಶೆಟ್ಟರ್ ಅವರು, ‘ಸಂಶೋಧನೆಗೆ ಅದರದ್ದೇ ಆದ ಒಂದು ಭಾಷೆ ಇದೆ. ಆ ಭಾಷೆ ಪಳಗಿಸಿಕೊಳ್ಳದ ಹೊರತು ಉತ್ತಮ ಕೃತಿ ಕೊಡಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.<br /> <br /> ‘ಸಂಸ್ಕೃತ ಭಾಷೆ ತನ್ನದೆ ಲಿಪಿ ಹೊಂದಿರಲಿಲ್ಲ ಎಂದು ಈ ಹಿಂದೊಮ್ಮೆ ನಾನು ಹೇಳಿದ್ದೆ. ಆಗ ನನ್ನನ್ನು ಸಂಸ್ಕೃತ, ಬ್ರಾಹ್ಮಣರು ಹಾಗೂ ಪರಂಪರೆಯ ವಿರೋಧಿ ಎಂದು ಟೀಕಿಸಲಾಗಿತ್ತು. ಇದರಿಂದ ನಾನು ಹೆಚ್ಚಿನ ಸಂಶೋಧನೆ, ಪುನರ್ ಪರಿಶೀಲನೆ ಮಾಡಿದೆ. ಹಾಗಾಗಿ ಇನ್ನೂ ಅನೇಕ ಹೊಸ ಹೊಳಹುಗಳು ದೊರೆತವು’ ಎಂದರು.<br /> <br /> ‘ಇಂದು ಕಣ್ಣು ತೆರೆಸುವ ಸಂಶೋಧನೆಯ ಅಗತ್ಯವಿದೆ. ಅದಕ್ಕೆ ಇತ್ತೀಚಿನ ದಿನಗಳಲ್ಲಿ ಮನ್ನಣೆ ಸಿಗುತ್ತಿದೆ. ಈ ಕ್ಷೇತ್ರದಲ್ಲಿ ಹೆಚ್ಚಿನವರು ತೊಡಗಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದರು.<br /> <br /> ಅಭಿನಂದನ ಭಾಷಣ ಮಾಡಿದ ವಿಮರ್ಶಕ ಎಸ್.ಆರ್. ವಿಜಯ ಶಂಕರ ಅವರು, ‘ಶೆಟ್ಟರ್ ಅವರು ಶಾಸನಗಳ ಮರು ವ್ಯಾಖ್ಯಾನ ಮಾಡಿದರೆ, ಸುಮಿತ್ರಾಬಾಯಿ ಅವರು ಸ್ತ್ರೀವಾದದ ಬಗ್ಗೆ ತಿಳಿವಳಿಕೆ ಮೂಡಿಸಿದವರು. ಇನ್ನೂ ಮೊಗಸಾಲೆ ಅವರು ಗಡಿ ಭಾಗದಲ್ಲಿ ಕನ್ನಡದ ಪರಿಚಾರಿಕೆ ಮಾಡಿದವರು’ ಎಂದು ಹೇಳಿದರು.<br /> <br /> ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಅವರು, ‘ಮಾಸ್ತಿ ಅವರು ಬೇಂದ್ರೆ ಅವರ ಸಾಹಿತ್ಯವನ್ನು ಗುರುತಿಸಿ ಹಳೆ ಮೈಸೂರಿನವರಿಗೆ ಪರಿಚಯ ಮಾಡಿ ಕೊಟ್ಟಿದ್ದರು. ಅಂತಹ ದೊಡ್ಡ ವ್ಯಕ್ತಿತ್ವ ಅವರದಾಗಿತ್ತು’ ಎಂದರು.<br /> ‘ಸಾಹಿತ್ಯದ ಮೂಲಕ ಕನ್ನಡಿಗರ ಮನಸ್ಸು ತಿದ್ದಿದವರು ಮಾಸ್ತಿ’ ಎಂದು ಬಿ.ಎನ್. ಸುಮಿತ್ರಾಬಾಯಿ ಅವರು ಹೇಳಿದರು. ಲೇಖಕ ಡಾ. ನಾ. ಮೊಗಸಾಲೆ ಅವರು ಮಾತನಾಡಿ, ‘ಮಾಸ್ತಿ ಅವರು ಇಡೀ ಕನ್ನಡನಾಡಿನ ಅಂತಃಕರಣ’ ಎಂದರು.<br /> <br /> ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ ಜಿ.ಎಸ್. ಸಿದ್ಧಲಿಂಗಯ್ಯ ಅವರು, ‘ಮಾಸ್ತಿಯವರು ಸಾಹಿತ್ಯದ ಜೊತೆಗೆ ವ್ಯಕ್ತಿಯಾಗಿಯೂ ದೊಡ್ಡವರಾಗಿದ್ದರು’ ಎಂದು ವರ್ಣಿಸಿದರು.<br /> <br /> ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್. ವೆಂಕಟಾಚಲಪತಿ ಹಾಗೂ ಸಮಿತಿ ಕಾರ್ಯದರ್ಶಿ ಗೀತಾ ರಾಮಾನುಜಮ್ ವೇದಿಕೆ ಮೇಲೆ ಉಪಸ್ಥಿತರಿದ್ದರು.<br /> <br /> <strong>₹ 8 ಕೋಟಿ ವೆಚ್ಚದಲ್ಲಿ ‘ಮಾಸ್ತಿ’ ಭವನ</strong><br /> ‘ನಗರದ ಉಲ್ಲಾಳ ಮುಖ್ಯರಸ್ತೆ ಸಮೀಪ ಟ್ರಸ್ಟ್ಗೆ ಸೇರಿದ ಅರ್ಧ ಎಕರೆ ಜಮೀನಿನಲ್ಲಿ ಮಾಸ್ತಿ ಭವನ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ’ ಎಂದು ಕೋಲಾರ ಡಾ. ಮಾಸ್ತಿ ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಅವರು ತಿಳಿಸಿದರು.</p>.<p>ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ‘300 ಆಸನಗಳ ಸಭಾಂಗಣ, ಗ್ರಂಥಾಲಯ ಸೇರಿದಂತೆ ಇತರ ಸೌಕರ್ಯಗಳಿರುವ ಭವನ ನಿರ್ಮಾಣಕ್ಕೆ ಅಂದಾಜು ₹ 8 ಕೋಟಿ ಖರ್ಚು ಬರಲಿದೆ’ ಎಂದರು.<br /> <br /> ‘ಈ ಸಂಬಂಧ ನೆರವು ನೀಡಬೇಕು ಎಂದು ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿತ್ತು. ₹ 1 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರದ ಕಡೆಯಿಂದ ಟಿಪ್ಪಣಿ ಸಿಕ್ಕಿದೆ. ಆದರೆ, ಇಲ್ಲಿಯವರೆಗೆ ಟ್ರಸ್ಟ್ಗೆ ಹಣ ಬಂದಿಲ್ಲ’ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸಂಶೋಧಕ ಪ್ರೊ. ಷ. ಶೆಟ್ಟರ್, ವಿಮರ್ಶಕಿ ಬಿ.ಎನ್. ಸುಮಿತ್ರಾ ಬಾಯಿ ಹಾಗೂ ಲೇಖಕ ಡಾ. ನಾ. ಮೊಗಸಾಲೆ ಅವರಿಗೆ 2015ನೇ ಸಾಲಿನ ‘ಮಾಸ್ತಿ’ ಪ್ರಶಸ್ತಿಯನ್ನು ಶನಿವಾರ ನಗರದಲ್ಲಿ ಪ್ರದಾನ ಮಾಡಲಾಯಿತು.<br /> <br /> ಈ ಮೂವರಿಗೆ ಕ್ರಮವಾಗಿ ಸಂಶೋಧನೆ, ವಿಮರ್ಶೆ ಹಾಗೂ ಸೃಜನಶೀಲ ಬರವಣಿಗೆಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿಯು ತಲಾ ₹ 25 ಸಾವಿರ ನಗದು ಒಳಗೊಂಡಿದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ ಪ್ರಶಸ್ತಿ ಸಮಿತಿ ಮತ್ತು ಡಾ. ಮಾಸ್ತಿ ಟ್ರಸ್ಟ್ ಕೋಲಾರ ಜಂಟಿಯಾಗಿ ಈ ಪ್ರಶಸ್ತಿ ನೀಡಿವೆ.<br /> <br /> ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ಷ. ಶೆಟ್ಟರ್ ಅವರು, ‘ಸಂಶೋಧನೆಗೆ ಅದರದ್ದೇ ಆದ ಒಂದು ಭಾಷೆ ಇದೆ. ಆ ಭಾಷೆ ಪಳಗಿಸಿಕೊಳ್ಳದ ಹೊರತು ಉತ್ತಮ ಕೃತಿ ಕೊಡಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.<br /> <br /> ‘ಸಂಸ್ಕೃತ ಭಾಷೆ ತನ್ನದೆ ಲಿಪಿ ಹೊಂದಿರಲಿಲ್ಲ ಎಂದು ಈ ಹಿಂದೊಮ್ಮೆ ನಾನು ಹೇಳಿದ್ದೆ. ಆಗ ನನ್ನನ್ನು ಸಂಸ್ಕೃತ, ಬ್ರಾಹ್ಮಣರು ಹಾಗೂ ಪರಂಪರೆಯ ವಿರೋಧಿ ಎಂದು ಟೀಕಿಸಲಾಗಿತ್ತು. ಇದರಿಂದ ನಾನು ಹೆಚ್ಚಿನ ಸಂಶೋಧನೆ, ಪುನರ್ ಪರಿಶೀಲನೆ ಮಾಡಿದೆ. ಹಾಗಾಗಿ ಇನ್ನೂ ಅನೇಕ ಹೊಸ ಹೊಳಹುಗಳು ದೊರೆತವು’ ಎಂದರು.<br /> <br /> ‘ಇಂದು ಕಣ್ಣು ತೆರೆಸುವ ಸಂಶೋಧನೆಯ ಅಗತ್ಯವಿದೆ. ಅದಕ್ಕೆ ಇತ್ತೀಚಿನ ದಿನಗಳಲ್ಲಿ ಮನ್ನಣೆ ಸಿಗುತ್ತಿದೆ. ಈ ಕ್ಷೇತ್ರದಲ್ಲಿ ಹೆಚ್ಚಿನವರು ತೊಡಗಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದರು.<br /> <br /> ಅಭಿನಂದನ ಭಾಷಣ ಮಾಡಿದ ವಿಮರ್ಶಕ ಎಸ್.ಆರ್. ವಿಜಯ ಶಂಕರ ಅವರು, ‘ಶೆಟ್ಟರ್ ಅವರು ಶಾಸನಗಳ ಮರು ವ್ಯಾಖ್ಯಾನ ಮಾಡಿದರೆ, ಸುಮಿತ್ರಾಬಾಯಿ ಅವರು ಸ್ತ್ರೀವಾದದ ಬಗ್ಗೆ ತಿಳಿವಳಿಕೆ ಮೂಡಿಸಿದವರು. ಇನ್ನೂ ಮೊಗಸಾಲೆ ಅವರು ಗಡಿ ಭಾಗದಲ್ಲಿ ಕನ್ನಡದ ಪರಿಚಾರಿಕೆ ಮಾಡಿದವರು’ ಎಂದು ಹೇಳಿದರು.<br /> <br /> ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಅವರು, ‘ಮಾಸ್ತಿ ಅವರು ಬೇಂದ್ರೆ ಅವರ ಸಾಹಿತ್ಯವನ್ನು ಗುರುತಿಸಿ ಹಳೆ ಮೈಸೂರಿನವರಿಗೆ ಪರಿಚಯ ಮಾಡಿ ಕೊಟ್ಟಿದ್ದರು. ಅಂತಹ ದೊಡ್ಡ ವ್ಯಕ್ತಿತ್ವ ಅವರದಾಗಿತ್ತು’ ಎಂದರು.<br /> ‘ಸಾಹಿತ್ಯದ ಮೂಲಕ ಕನ್ನಡಿಗರ ಮನಸ್ಸು ತಿದ್ದಿದವರು ಮಾಸ್ತಿ’ ಎಂದು ಬಿ.ಎನ್. ಸುಮಿತ್ರಾಬಾಯಿ ಅವರು ಹೇಳಿದರು. ಲೇಖಕ ಡಾ. ನಾ. ಮೊಗಸಾಲೆ ಅವರು ಮಾತನಾಡಿ, ‘ಮಾಸ್ತಿ ಅವರು ಇಡೀ ಕನ್ನಡನಾಡಿನ ಅಂತಃಕರಣ’ ಎಂದರು.<br /> <br /> ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ ಜಿ.ಎಸ್. ಸಿದ್ಧಲಿಂಗಯ್ಯ ಅವರು, ‘ಮಾಸ್ತಿಯವರು ಸಾಹಿತ್ಯದ ಜೊತೆಗೆ ವ್ಯಕ್ತಿಯಾಗಿಯೂ ದೊಡ್ಡವರಾಗಿದ್ದರು’ ಎಂದು ವರ್ಣಿಸಿದರು.<br /> <br /> ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್. ವೆಂಕಟಾಚಲಪತಿ ಹಾಗೂ ಸಮಿತಿ ಕಾರ್ಯದರ್ಶಿ ಗೀತಾ ರಾಮಾನುಜಮ್ ವೇದಿಕೆ ಮೇಲೆ ಉಪಸ್ಥಿತರಿದ್ದರು.<br /> <br /> <strong>₹ 8 ಕೋಟಿ ವೆಚ್ಚದಲ್ಲಿ ‘ಮಾಸ್ತಿ’ ಭವನ</strong><br /> ‘ನಗರದ ಉಲ್ಲಾಳ ಮುಖ್ಯರಸ್ತೆ ಸಮೀಪ ಟ್ರಸ್ಟ್ಗೆ ಸೇರಿದ ಅರ್ಧ ಎಕರೆ ಜಮೀನಿನಲ್ಲಿ ಮಾಸ್ತಿ ಭವನ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ’ ಎಂದು ಕೋಲಾರ ಡಾ. ಮಾಸ್ತಿ ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಅವರು ತಿಳಿಸಿದರು.</p>.<p>ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ‘300 ಆಸನಗಳ ಸಭಾಂಗಣ, ಗ್ರಂಥಾಲಯ ಸೇರಿದಂತೆ ಇತರ ಸೌಕರ್ಯಗಳಿರುವ ಭವನ ನಿರ್ಮಾಣಕ್ಕೆ ಅಂದಾಜು ₹ 8 ಕೋಟಿ ಖರ್ಚು ಬರಲಿದೆ’ ಎಂದರು.<br /> <br /> ‘ಈ ಸಂಬಂಧ ನೆರವು ನೀಡಬೇಕು ಎಂದು ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿತ್ತು. ₹ 1 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರದ ಕಡೆಯಿಂದ ಟಿಪ್ಪಣಿ ಸಿಕ್ಕಿದೆ. ಆದರೆ, ಇಲ್ಲಿಯವರೆಗೆ ಟ್ರಸ್ಟ್ಗೆ ಹಣ ಬಂದಿಲ್ಲ’ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>