ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನನುಡಿ’ ಸಾಹಿತ್ಯ ಸಮಾವೇಶ

Last Updated 29 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಹಿತ್ಯ ಹಾಗೂ ಸಂಸ್ಕೃತಿ­ಯನ್ನು ವ್ಯಾಪಾರದ ಸರಕಾಗಿ ಬಳಸಿ­ಕೊಳ್ಳು­ತ್ತಿರುವ ಕಾರ್ಪೊರೇಟ್‌ ವಲ­ಯದ ನೀತಿಯನ್ನು ವಿರೋಧಿಸಲು  ಮಂಗಳೂರಿನಲ್ಲಿ ಡಿ.13 ಹಾಗೂ 14 ರಂದು ‘ಜನನುಡಿ–2014’ ಸಾಹಿತ್ಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹಿರಿಯ ಸಾಹಿತಿ ಎಸ್‌.ಜಿ.­ಸಿದ್ದ­ರಾಮಯ್ಯ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾ­ಗೋಷ್ಠಿ­ಯಲ್ಲಿ ಮಾತನಾಡಿ,  ಮಂಗಳೂರಿನ  ‘ಅಭಿಮತ’ ಸಂಸ್ಥೆಯ ವತಿಯಿಂದ ಸಮಾ­ವೇಶ ನಡೆಯಲಿದೆ.  ಸಾಹಿತಿ­ಗಳು, ಕವಿಗಳು, ವಿಚಾರವಾದಿಗಳು ಭಾಗ­­ವ­ಹಿಸಲಿದ್ದಾರೆ. ಪ್ರಸ್ತುತ ಸಾಹಿತ್ಯ ಕ್ಷೇತ್ರದಲ್ಲಿನ ವಿದ್ಯಮಾನಗಳು, ಶಿಕ್ಷಣ, ಸಾಮಾ­ಜಿಕ ಕ್ಷೇತ್ರದಲ್ಲಿ ನೈತಿಕತೆಯ ಕುಸಿತ ಸೇರಿದಂತೆ ಹಲವು ವಿಷಯಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ’ ಎಂದರು.

‘ಕಾರ್ಪೊರೇಟ್‌ ವಲಯವು ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಮುಖ­­ವಾಡ­ವ­ನ್ನಾಗಿ ಬಳಸಿಕೊಳ್ಳುತ್ತಿದೆ. ಜನ­ಸಂವೇದನೆ ಇರುವ ಸಾಹಿತ್ಯವನ್ನು ನಾಶ ಮಾಡಿ, ಶೋಷಕ ಮೌಲ್ಯಗಳ ಸಾಹಿ­ತ್ಯವನ್ನು ಜನರ ಮೇಲೆ ಬಲ­ವಂತ­ವಾಗಿ ಹೇರಲು ಹೋರಟಿದೆ’ ಎಂದು ಆರೋಪಿಸಿದರು.

ಲೇಖಕಿ ಕೆ. ನೀಲಾ, ಹಿರಿಯ ರಂಗ­ಕರ್ಮಿ ಟಿ.ಸುರೇಂದ್ರ ರಾವ್‌, ಚಿತ್ರ ನಿರ್ದೇ­­ಶಕ ಟಿ.ಕೆ.ದಯಾನಂದ, ಎಸ್ಎಫ್ಐ ರಾಜ್ಯ ಘಟಕದ ಅಧ್ಯಕ್ಷ ಅನಂತ್ ನಾಯಕ್‌ ಮತ್ತಿತರರು ಉಪಸ್ಥಿತರಿದ್ದರು.

ಮಡೆಮಡೆ ಸ್ನಾನ, ಸಂಸ್ಕೃತಿ: ಕಳಂಕ
ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು ಪ್ರಚಾರಕ್ಕಾಗಿ ಮಡೆ ಮಡೆ ಸ್ನಾನವನ್ನು ವಿರೋಧಿಸು­ತ್ತಿದ್ದಾರೆ ಎಂಬುದು ತಪ್ಪು ಗ್ರಹಿಕೆಯಾ­ಗಿದೆ. ಮೂಢ­ನಂಬಿಕೆ, ಅನಿಷ್ಟ ಆಚರ­ಣೆಗಳ ವಿರುದ್ಧ ಅವರು ಹೋರಾಟ ನಡೆಸು­ತ್ತಿ­ದ್ದಾರೆ. ಮಡೆ ಮಡೆ ಸ್ನಾನವು ಭಾರತ ಸಂಸ್ಕೃತಿಗೆ ಅಂಟಿದ ಕಳಂಕ­ವಾ­ಗಿದೆ’ ಎಂದು ಎಸ್‌.ಜಿ.ಸಿದ್ದರಾಮಯ್ಯ  ಅಭಿ­ಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT