<p><strong>ಮಡಿಕೇರಿ:</strong> ಲೇಖಕರಿಗೆ ಸಂಭಾವನೆ ನೀಡದ ಹಾಗೂ ಬೇನಾಮಿ ಹೆಸರಿನಲ್ಲಿ ಪುಸ್ತಕ ಪ್ರಕಟಿಸುವ ಪ್ರಕಾಶಕರನ್ನು ಕಪ್ಪು ಪಟ್ಟಿಗೆ ಸೇರಿಸಲು ನಾವು ಸಿದ್ಧರಿದ್ದೇವೆ. ಆದರೆ, ಇದುವರೆಗೆ ಯಾವ ಲೇಖಕರೂ ಪ್ರಕಾಶಕರ ವಿರುದ್ಧ ದೂರು ನೀಡಿಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಹೇಳಿದರು.<br /> <br /> ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಲವು ಪ್ರತಿಷ್ಠಿತ ಪ್ರಕಾಶಕ ಸಂಸ್ಥೆಗಳನ್ನು ಹೊರತುಪಡಿಸಿದರೆ ಇನ್ನುಳಿದ ಬಹಳಷ್ಟು ಸಂಸ್ಥೆಗಳು ಲೇಖಕರಿಗೆ, ಸಾಹಿತಿಗಳಿಗೆ ಸೂಕ್ತ ಸಂಭಾವನೆ ನೀಡುವುದಿಲ್ಲ. ಹಲವು ಪ್ರಕರಣಗಳಲ್ಲಿ ಲೇಖಕರಿಂದಲೇ ಹಣ ಪಡೆದು ಪುಸ್ತಕ ಪ್ರಕಟಿಸಿದ ಉದಾಹರಣೆಗಳು ಸಾಕಷ್ಟಿವೆ ಎಂದು ತಿಳಿಸಿದರು.<br /> <br /> ಈ ರೀತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದರಿಂದಾಗಿ ಪ್ರಕಾಶಕರು ಬೆಳೆದು ಶ್ರೀಮಂತರಾದರು. ಆದರೆ, ಲೇಖಕರು– ಸಾಹಿತಿಗಳು ಬಡವರಾಗಿಯೇ ಉಳಿದರು. ಇದನ್ನು ತಪ್ಪಿಸುವ ಉದ್ದೇಶದಿಂದ ಪ್ರಕಾಶಕರ ಸಹಕಾರಿ ಸಂಘ ಸ್ಥಾಪಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದರು.<br /> <br /> ಪ್ರತಿ ಜಿಲ್ಲೆಯಲ್ಲಿ ಲೇಖಕರು– ಪ್ರಕಾಶಕರು– ಓದುಗರನ್ನು ಒಳಗೊಂಡ ಸಹಕಾರಿ ಸಂಘವನ್ನು ಸ್ಥಾಪಿಸಲಾಗುವುದು. ಸಂಘವು ಪ್ರಕಟಿಸುವ ಅತ್ಯುತ್ತಮ ಪುಸ್ತಕಗಳನ್ನು ಅಕಾಡೆಮಿಯು ಖರೀದಿಸಲಿದೆ. ಹಣದ ವ್ಯವಹಾರವನ್ನು ಪಾರದರ್ಶಕವಾಗಿ ನಿಭಾಯಿಸಲಾಗುವುದು ಎಂದು ಹೇಳಿದರು.<br /> <br /> <strong>ಮಠಗಳಲ್ಲಿ ಕಪ್ಪು ಹಣ: </strong>ಜನರಿಗೆ ಅನ್ನ, ಶಿಕ್ಷಣ, ಆರೋಗ್ಯವನ್ನು ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು. ಧರ್ಮ, ಪೂಜೆ ಪುನಸ್ಕಾರದಂತಹ ಧಾರ್ಮಿಕ ವಿಷಯಗಳನ್ನು ನಿಭಾಯಿಸಲು ಮಠಗಳಿಗೆ ಬಿಡಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಹಲವು ಮಠಗಳಿವೆ.<br /> <br /> ಇವು ರಾಜಕಾರಣಿಗಳ ಕಪ್ಪುಹಣವನ್ನು ಇಟ್ಟುಕೊಳ್ಳುವ ಗೋದಾಮು ಆಗಿವೆ. ಚುನಾವಣೆಗಳು ಬಂದಾಗ ಇದೇ ಹಣವನ್ನು ಮಠಗಳು ಮರಳಿ ನೀಡುತ್ತವೆ. ಈ ರೀತಿಯಾಗಿ ಹೊಂದಾಣಿಕೆಯಾಗದಿದ್ದರೆ ಹೊಸ ಮಠಗಳು ಹಾಗೂ ಹೊಸ ಸ್ವಾಮೀಜಿಯನ್ನು ಸಹ ಹುಟ್ಟು ಹಾಕಲಾಗುತ್ತದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಲೇಖಕರಿಗೆ ಸಂಭಾವನೆ ನೀಡದ ಹಾಗೂ ಬೇನಾಮಿ ಹೆಸರಿನಲ್ಲಿ ಪುಸ್ತಕ ಪ್ರಕಟಿಸುವ ಪ್ರಕಾಶಕರನ್ನು ಕಪ್ಪು ಪಟ್ಟಿಗೆ ಸೇರಿಸಲು ನಾವು ಸಿದ್ಧರಿದ್ದೇವೆ. ಆದರೆ, ಇದುವರೆಗೆ ಯಾವ ಲೇಖಕರೂ ಪ್ರಕಾಶಕರ ವಿರುದ್ಧ ದೂರು ನೀಡಿಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಹೇಳಿದರು.<br /> <br /> ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಲವು ಪ್ರತಿಷ್ಠಿತ ಪ್ರಕಾಶಕ ಸಂಸ್ಥೆಗಳನ್ನು ಹೊರತುಪಡಿಸಿದರೆ ಇನ್ನುಳಿದ ಬಹಳಷ್ಟು ಸಂಸ್ಥೆಗಳು ಲೇಖಕರಿಗೆ, ಸಾಹಿತಿಗಳಿಗೆ ಸೂಕ್ತ ಸಂಭಾವನೆ ನೀಡುವುದಿಲ್ಲ. ಹಲವು ಪ್ರಕರಣಗಳಲ್ಲಿ ಲೇಖಕರಿಂದಲೇ ಹಣ ಪಡೆದು ಪುಸ್ತಕ ಪ್ರಕಟಿಸಿದ ಉದಾಹರಣೆಗಳು ಸಾಕಷ್ಟಿವೆ ಎಂದು ತಿಳಿಸಿದರು.<br /> <br /> ಈ ರೀತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದರಿಂದಾಗಿ ಪ್ರಕಾಶಕರು ಬೆಳೆದು ಶ್ರೀಮಂತರಾದರು. ಆದರೆ, ಲೇಖಕರು– ಸಾಹಿತಿಗಳು ಬಡವರಾಗಿಯೇ ಉಳಿದರು. ಇದನ್ನು ತಪ್ಪಿಸುವ ಉದ್ದೇಶದಿಂದ ಪ್ರಕಾಶಕರ ಸಹಕಾರಿ ಸಂಘ ಸ್ಥಾಪಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದರು.<br /> <br /> ಪ್ರತಿ ಜಿಲ್ಲೆಯಲ್ಲಿ ಲೇಖಕರು– ಪ್ರಕಾಶಕರು– ಓದುಗರನ್ನು ಒಳಗೊಂಡ ಸಹಕಾರಿ ಸಂಘವನ್ನು ಸ್ಥಾಪಿಸಲಾಗುವುದು. ಸಂಘವು ಪ್ರಕಟಿಸುವ ಅತ್ಯುತ್ತಮ ಪುಸ್ತಕಗಳನ್ನು ಅಕಾಡೆಮಿಯು ಖರೀದಿಸಲಿದೆ. ಹಣದ ವ್ಯವಹಾರವನ್ನು ಪಾರದರ್ಶಕವಾಗಿ ನಿಭಾಯಿಸಲಾಗುವುದು ಎಂದು ಹೇಳಿದರು.<br /> <br /> <strong>ಮಠಗಳಲ್ಲಿ ಕಪ್ಪು ಹಣ: </strong>ಜನರಿಗೆ ಅನ್ನ, ಶಿಕ್ಷಣ, ಆರೋಗ್ಯವನ್ನು ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು. ಧರ್ಮ, ಪೂಜೆ ಪುನಸ್ಕಾರದಂತಹ ಧಾರ್ಮಿಕ ವಿಷಯಗಳನ್ನು ನಿಭಾಯಿಸಲು ಮಠಗಳಿಗೆ ಬಿಡಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಹಲವು ಮಠಗಳಿವೆ.<br /> <br /> ಇವು ರಾಜಕಾರಣಿಗಳ ಕಪ್ಪುಹಣವನ್ನು ಇಟ್ಟುಕೊಳ್ಳುವ ಗೋದಾಮು ಆಗಿವೆ. ಚುನಾವಣೆಗಳು ಬಂದಾಗ ಇದೇ ಹಣವನ್ನು ಮಠಗಳು ಮರಳಿ ನೀಡುತ್ತವೆ. ಈ ರೀತಿಯಾಗಿ ಹೊಂದಾಣಿಕೆಯಾಗದಿದ್ದರೆ ಹೊಸ ಮಠಗಳು ಹಾಗೂ ಹೊಸ ಸ್ವಾಮೀಜಿಯನ್ನು ಸಹ ಹುಟ್ಟು ಹಾಕಲಾಗುತ್ತದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>