<p><strong>ಬೆಂಗಳೂರು:</strong> ‘ಜನಪದ ಮಹಾಕಾವ್ಯದೊಳಗಿನ ರೋಚಕ ಕಥೆಗಳನ್ನು ನಮ್ಮ ಮಕ್ಕಳಿಗೆ ಪರಿಚಯಿಸುವುದು ಇಂದಿನ ಅಗತ್ಯ’ ಎಂದು ಕವಿ ಎಚ್.ಎಸ್ವೆಂಕಟೇಶಮೂರ್ತಿ ಅವರು ಅಭಿಪ್ರಾಯಪಟ್ಟರು.<br /> <br /> ನಗರದಲ್ಲಿ ಭಾನುವಾರ ಅಂಕಿತ ಪುಸ್ತಕ ಪ್ರಕಾಶನ ಆಯೋಜಿಸಿದ್ದ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.<br /> ‘ಮಕ್ಕಳಿಗೆ ಒಳ್ಳೆಯ ಕಥೆಗಳನ್ನು ಬರೆಯುವವರು ಬಹಳ ಕಡಿಮೆಯಾಗಿದ್ದಾರೆ. ಗದ್ಯದ ಬಗ್ಗೆ ನಮ್ಮ ಲೇಖಕರು ಯಾಕೆ ಈ ರೀತಿಯ ಪಕ್ಷಪಾತ ವಹಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಒಳ್ಳೆಯ ಗದ್ಯ ಬರೆಯುವುದು ಒಂದು ಸವಾಲು ಎನ್ನುವುದೇ ಇದಕ್ಕೆ ಕಾರಣವಿರಬಹುದು’ ಎಂದು ಹೇಳಿದರು.<br /> <br /> ‘ಮಕ್ಕಳಿಗೆ ಒಳ್ಳೆಯ ಗದ್ಯ ಬರೆಯುವುದು ಬಹಳ ಅಗತ್ಯ. ನಮ್ಮಲ್ಲಿ ಅದಕ್ಕೆ ಒಂದು ದೊಡ್ಡ ಪರಂಪರೆಯೇ ಇದೆ. ಮಕ್ಕಳಿಗೆ ಗದ್ಯ ಬರೆಯುವುದು ಬಹಳ ಕಷ್ಟ. ಅದು ಚಿಕ್ಕ, ಚೊಕ್ಕ ಮತ್ತು ಸುಂದರವಾಗಿರಬೇಕು. ಈ ರೀತಿಯಲ್ಲಿ ಪ.ರಾಮಕೃಷ್ಣಶಾಸ್ತ್ರಿ ಅವರು ಉತ್ತಮ ಕಥೆಗಳನ್ನು ಬರೆಯುತ್ತಿದ್ದಾರೆ’ ಎಂದು ಶ್ಲಾಘಿಸಿದರು.<br /> <br /> ‘ತೇಜಸ್ವಿ ಅವರ ಬರವಣಿಗೆಯಿಂದ ಸಾಕಷ್ಟು ಪ್ರಭಾವಿತರಾದ ಕೆ.ಎನ್.ಗಣೇಶಯ್ಯ ಅವರು ವೈಜ್ಞಾನಿಕ, ಪೌರಾಣಿಕ, ಐತಿಹಾಸಿಕ...<br /> ಈ ಎಲ್ಲ ಸಂಗತಿಗಳಲ್ಲಿ ಇರುವ ರೋಚಕತೆಯ ಅಂಶವನ್ನು ಗುರುತಿಸಿ, ಅದು ಸತ್ಯ ಎಂದು ಭಾಸವಾಗುವಂತೆ ಸಂಶೋಧನೆಯ ನೆಲೆಯಲ್ಲಿ ಕೃತಿಗಳನ್ನು ಕಟ್ಟುತ್ತಾರೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.<br /> <br /> ವಿಮರ್ಶಕ ಬೈರಮಂಗಲ ರಾಮೇಗೌಡ, ಸಾಹಿತಿ ಸಂಪಟೂರು ವಿಶ್ವನಾಥ್ ಮತ್ತು ಲೇಖಕರಾದ ಕೆ.ಎನ್.ಗಣೇಶಯ್ಯ ಮತ್ತು ಪ.ರಾಮಕೃಷ್ಣಶಾಸ್ತ್ರಿ ಉಪಸ್ಥಿತರಿದ್ದರು.<br /> <br /> <strong>ಬಿಡುಗಡೆಗೊಂಡ ಪುಸ್ತಕಗಳು</strong><br /> * ಡಾ.ಕೆ.ಎನ್.ಗಣೇಶಯ್ಯ ಅವರ ಮಿಹಿರಾಕುಲ (ಕಥೆಗಳು) – ₨95 ಭಿನ್ನ–ಬಿಂಬ (ಲೇಖನಗಳು)– ₨80</p>.<p>* ಪ.ರಾಮಕೃಷ್ಣಶಾಸ್ತ್ರಿಯ ಅವರ ಮಣ್ಣಿಗೆ ಮಣ್ಣು (ಮಕ್ಕಳ ಕಥೆಗಳು) – ₨50<br /> * ವಿನಯವಿಲ್ಲದ ವಿದ್ಯೆ (ಮಕ್ಕಳ ಕಥೆಗಳು) – ₨50</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಜನಪದ ಮಹಾಕಾವ್ಯದೊಳಗಿನ ರೋಚಕ ಕಥೆಗಳನ್ನು ನಮ್ಮ ಮಕ್ಕಳಿಗೆ ಪರಿಚಯಿಸುವುದು ಇಂದಿನ ಅಗತ್ಯ’ ಎಂದು ಕವಿ ಎಚ್.ಎಸ್ವೆಂಕಟೇಶಮೂರ್ತಿ ಅವರು ಅಭಿಪ್ರಾಯಪಟ್ಟರು.<br /> <br /> ನಗರದಲ್ಲಿ ಭಾನುವಾರ ಅಂಕಿತ ಪುಸ್ತಕ ಪ್ರಕಾಶನ ಆಯೋಜಿಸಿದ್ದ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.<br /> ‘ಮಕ್ಕಳಿಗೆ ಒಳ್ಳೆಯ ಕಥೆಗಳನ್ನು ಬರೆಯುವವರು ಬಹಳ ಕಡಿಮೆಯಾಗಿದ್ದಾರೆ. ಗದ್ಯದ ಬಗ್ಗೆ ನಮ್ಮ ಲೇಖಕರು ಯಾಕೆ ಈ ರೀತಿಯ ಪಕ್ಷಪಾತ ವಹಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಒಳ್ಳೆಯ ಗದ್ಯ ಬರೆಯುವುದು ಒಂದು ಸವಾಲು ಎನ್ನುವುದೇ ಇದಕ್ಕೆ ಕಾರಣವಿರಬಹುದು’ ಎಂದು ಹೇಳಿದರು.<br /> <br /> ‘ಮಕ್ಕಳಿಗೆ ಒಳ್ಳೆಯ ಗದ್ಯ ಬರೆಯುವುದು ಬಹಳ ಅಗತ್ಯ. ನಮ್ಮಲ್ಲಿ ಅದಕ್ಕೆ ಒಂದು ದೊಡ್ಡ ಪರಂಪರೆಯೇ ಇದೆ. ಮಕ್ಕಳಿಗೆ ಗದ್ಯ ಬರೆಯುವುದು ಬಹಳ ಕಷ್ಟ. ಅದು ಚಿಕ್ಕ, ಚೊಕ್ಕ ಮತ್ತು ಸುಂದರವಾಗಿರಬೇಕು. ಈ ರೀತಿಯಲ್ಲಿ ಪ.ರಾಮಕೃಷ್ಣಶಾಸ್ತ್ರಿ ಅವರು ಉತ್ತಮ ಕಥೆಗಳನ್ನು ಬರೆಯುತ್ತಿದ್ದಾರೆ’ ಎಂದು ಶ್ಲಾಘಿಸಿದರು.<br /> <br /> ‘ತೇಜಸ್ವಿ ಅವರ ಬರವಣಿಗೆಯಿಂದ ಸಾಕಷ್ಟು ಪ್ರಭಾವಿತರಾದ ಕೆ.ಎನ್.ಗಣೇಶಯ್ಯ ಅವರು ವೈಜ್ಞಾನಿಕ, ಪೌರಾಣಿಕ, ಐತಿಹಾಸಿಕ...<br /> ಈ ಎಲ್ಲ ಸಂಗತಿಗಳಲ್ಲಿ ಇರುವ ರೋಚಕತೆಯ ಅಂಶವನ್ನು ಗುರುತಿಸಿ, ಅದು ಸತ್ಯ ಎಂದು ಭಾಸವಾಗುವಂತೆ ಸಂಶೋಧನೆಯ ನೆಲೆಯಲ್ಲಿ ಕೃತಿಗಳನ್ನು ಕಟ್ಟುತ್ತಾರೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.<br /> <br /> ವಿಮರ್ಶಕ ಬೈರಮಂಗಲ ರಾಮೇಗೌಡ, ಸಾಹಿತಿ ಸಂಪಟೂರು ವಿಶ್ವನಾಥ್ ಮತ್ತು ಲೇಖಕರಾದ ಕೆ.ಎನ್.ಗಣೇಶಯ್ಯ ಮತ್ತು ಪ.ರಾಮಕೃಷ್ಣಶಾಸ್ತ್ರಿ ಉಪಸ್ಥಿತರಿದ್ದರು.<br /> <br /> <strong>ಬಿಡುಗಡೆಗೊಂಡ ಪುಸ್ತಕಗಳು</strong><br /> * ಡಾ.ಕೆ.ಎನ್.ಗಣೇಶಯ್ಯ ಅವರ ಮಿಹಿರಾಕುಲ (ಕಥೆಗಳು) – ₨95 ಭಿನ್ನ–ಬಿಂಬ (ಲೇಖನಗಳು)– ₨80</p>.<p>* ಪ.ರಾಮಕೃಷ್ಣಶಾಸ್ತ್ರಿಯ ಅವರ ಮಣ್ಣಿಗೆ ಮಣ್ಣು (ಮಕ್ಕಳ ಕಥೆಗಳು) – ₨50<br /> * ವಿನಯವಿಲ್ಲದ ವಿದ್ಯೆ (ಮಕ್ಕಳ ಕಥೆಗಳು) – ₨50</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>