<p><strong>ಬೆಂಗಳೂರು:</strong><br /> ‘ಸೂರ ಗುಡಿಸಿಲಿನೊಳಗ ಊರ ಬೆಳಗಿದ ದೀಪ..<br /> ದಾರವಾದಳು ಹೂಗಳ ಹಾರಕ್ಕ<br /> ಹೆಸರು ಸಾಲುಮರದ ತಿಮ್ಮಕ್ಕ...’<br /> ಎಂದು ಪರಿಸರ ಪ್ರೇಮಿ ಗಾಯಕರು ಹಾಡುತ್ತಿದ್ದರೆ ಇಡೀ ಸಭಾಂಗಣವೇ ಸ್ತಬ್ಧವಾಗಿ ಕೇಳಿಸಿಕೊಳ್ಳುತ್ತಿತ್ತು.<br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಯನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಈ ಹಾಡು ಗುನುಗುಣಿಸುತ್ತಿದ್ದರೆ, ಪರಿಸರವಾದಿ ತಿಮ್ಮಕ್ಕ ಸ್ವತಃ ತಲೆದೂಗಿದರು. ಈ ಸಂದರ್ಭದಲ್ಲಿ ತಮ್ಮ ಜೀವನಾನುಭವ, ಪರಿಸರ ಪ್ರೇಮದ ಕುರಿತು ಮಾತನಾಡಿದರು.<br /> <br /> </p>.<p>‘ಮದುವೆಯಾಗಿ ದಿನಗಳು ಕಳೆಯುತ್ತ ಬಂದರೂ, ಮಕ್ಕಳಾಗುವ ಭಾಗ್ಯ ಕೂಡಿ ಬರಲಿಲ್ಲ. ಹೀಗಾಗಿ, ನಾನು ಮತ್ತು ನನ್ನ ಪತಿ ಮಕ್ಕಳಿಲ್ಲದಿರುವ ಕೊರಗನ್ನು ಗಿಡ ನೆಡುವುದರಲ್ಲಿ ಮತ್ತು ಪೋಷಿಸುವುದರಲ್ಲಿ ಕಂಡುಕೊಂಡೆವು. ಇದರಲ್ಲಿಯೇ ಜೀವನ ಸಾರ್ಥಕ-ವಾಯಿತು. ಅಂದಿನಿಂದ, ಮರಗಳೇ ಮಕ್ಕಳಾದರು’ ಎಂದು ನುಡಿದರು.<br /> <br /> ‘ಇಡೀ ಮನೆಯು ಪ್ರಶಸ್ತಿಗಳು, ಪ್ರಶಸ್ತಿ ಪತ್ರಗಳು, ಪಾರಿತೋಷಕಗಳಿಂದ ತುಂಬಿದೆ. ಆದರೂ, ಬದುಕು ಸವೆಸುವುದು ಇಂದು ದುಸ್ತರವಾಗಿದೆ. ಸಾಲು ಮರಗಳನ್ನು ನೆಟ್ಟು ಬೆಳೆಸಿದ ತಿಮ್ಮಕ್ಕನ ಹತ್ತಿರ ಇಂದು ಒಂದು ಬಿಡಿಕಾಸೂ ಇಲ್ಲ’ ಎಂದು ವ್ಯಂಗ್ಯವಾಡಿದರು.<br /> ‘ಎಷ್ಟು ಮರಗಳನ್ನು ನೆಟ್ಟಿದ್ದೇವೆ ಎಂದು ಲೆಕ್ಕ ಇಟ್ಟು ನೆಟ್ಟಿಲ್ಲ. ಪಠ್ಯದಲ್ಲಿ ಒಂದು ಕಡೆ 284 ಮರಗಳೆಂದು ಇನ್ನೊಂದು ಕಡೆಯಲ್ಲಿ 484 ಮರಗಳೆಂದು ಹೇಳುತ್ತಾರೆ. ಅಸಲಿ ಎಷ್ಟು ಮರಗಳಿವೆ ಎಂದು ತಿಳಿದಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong><br /> ‘ಸೂರ ಗುಡಿಸಿಲಿನೊಳಗ ಊರ ಬೆಳಗಿದ ದೀಪ..<br /> ದಾರವಾದಳು ಹೂಗಳ ಹಾರಕ್ಕ<br /> ಹೆಸರು ಸಾಲುಮರದ ತಿಮ್ಮಕ್ಕ...’<br /> ಎಂದು ಪರಿಸರ ಪ್ರೇಮಿ ಗಾಯಕರು ಹಾಡುತ್ತಿದ್ದರೆ ಇಡೀ ಸಭಾಂಗಣವೇ ಸ್ತಬ್ಧವಾಗಿ ಕೇಳಿಸಿಕೊಳ್ಳುತ್ತಿತ್ತು.<br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಯನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಈ ಹಾಡು ಗುನುಗುಣಿಸುತ್ತಿದ್ದರೆ, ಪರಿಸರವಾದಿ ತಿಮ್ಮಕ್ಕ ಸ್ವತಃ ತಲೆದೂಗಿದರು. ಈ ಸಂದರ್ಭದಲ್ಲಿ ತಮ್ಮ ಜೀವನಾನುಭವ, ಪರಿಸರ ಪ್ರೇಮದ ಕುರಿತು ಮಾತನಾಡಿದರು.<br /> <br /> </p>.<p>‘ಮದುವೆಯಾಗಿ ದಿನಗಳು ಕಳೆಯುತ್ತ ಬಂದರೂ, ಮಕ್ಕಳಾಗುವ ಭಾಗ್ಯ ಕೂಡಿ ಬರಲಿಲ್ಲ. ಹೀಗಾಗಿ, ನಾನು ಮತ್ತು ನನ್ನ ಪತಿ ಮಕ್ಕಳಿಲ್ಲದಿರುವ ಕೊರಗನ್ನು ಗಿಡ ನೆಡುವುದರಲ್ಲಿ ಮತ್ತು ಪೋಷಿಸುವುದರಲ್ಲಿ ಕಂಡುಕೊಂಡೆವು. ಇದರಲ್ಲಿಯೇ ಜೀವನ ಸಾರ್ಥಕ-ವಾಯಿತು. ಅಂದಿನಿಂದ, ಮರಗಳೇ ಮಕ್ಕಳಾದರು’ ಎಂದು ನುಡಿದರು.<br /> <br /> ‘ಇಡೀ ಮನೆಯು ಪ್ರಶಸ್ತಿಗಳು, ಪ್ರಶಸ್ತಿ ಪತ್ರಗಳು, ಪಾರಿತೋಷಕಗಳಿಂದ ತುಂಬಿದೆ. ಆದರೂ, ಬದುಕು ಸವೆಸುವುದು ಇಂದು ದುಸ್ತರವಾಗಿದೆ. ಸಾಲು ಮರಗಳನ್ನು ನೆಟ್ಟು ಬೆಳೆಸಿದ ತಿಮ್ಮಕ್ಕನ ಹತ್ತಿರ ಇಂದು ಒಂದು ಬಿಡಿಕಾಸೂ ಇಲ್ಲ’ ಎಂದು ವ್ಯಂಗ್ಯವಾಡಿದರು.<br /> ‘ಎಷ್ಟು ಮರಗಳನ್ನು ನೆಟ್ಟಿದ್ದೇವೆ ಎಂದು ಲೆಕ್ಕ ಇಟ್ಟು ನೆಟ್ಟಿಲ್ಲ. ಪಠ್ಯದಲ್ಲಿ ಒಂದು ಕಡೆ 284 ಮರಗಳೆಂದು ಇನ್ನೊಂದು ಕಡೆಯಲ್ಲಿ 484 ಮರಗಳೆಂದು ಹೇಳುತ್ತಾರೆ. ಅಸಲಿ ಎಷ್ಟು ಮರಗಳಿವೆ ಎಂದು ತಿಳಿದಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>