<p>ಬೆಂಗಳೂರು: ‘ಹನಿಗವನ ಹಾಗೂ ಚುಟುಕುಗಳು ಸುಭಾಷಿತಗಳಿದ್ದಂತೆ. ಕಿರಿದರಲ್ಲಿ ಹಿರಿಯ ಅರ್ಥ ಹೇಳುವುದು ಹನಿಗವನ ಹಾಗೂ ಚುಟುಕುಗಳ ವೈಶಿಷ್ಟ್ಯ’ ಎಂದು ಸಾಹಿತಿ ಎಂ.ಎನ್.ವ್ಯಾಸರಾವ್ ಅಭಿಪ್ರಾಯಪಟ್ಟರು.</p>.<p>ಅಂಕಿತ ಪುಸ್ತಕ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಜೋಗಿ ಅವರ ‘ಚೈತ್ರ ವೈಶಾಖ ಋತು’, ಎನ್.ಸಂಧ್ಯಾರಾಣಿ ಸಂಪಾದಿಸಿರುವ ‘ಜೋಗಿ ರೀಡರ್’, ಎಚ್.ಡುಂಡಿರಾಜ್ ಅವರ ‘ಹನಿವಾಹಿನಿ’ ಮತ್ತು ಎಸ್.ಸುರೇಂದ್ರನಾಥ್ ಅವರ ‘ತಾಪತ್ರಯಗಳು’ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ಹನಿಗವನ ಹಾಗೂ ಚುಟುಕುಗಳು ನೋಡಲು ಲಘುವಾಗಿ ಕಾಣಬಹುದು. ಆದರೆ, ಅವುಗಳ ಅರ್ಥವಿಸ್ತಾರ ಹಿರಿದಾಗಿರುತ್ತದೆ. ಕನ್ನಡದಲ್ಲಿ ಹನಿಗವನ ಪ್ರಕಾರಕ್ಕೆ ಡುಂಡಿರಾಜ್ ಅವರ ಕೊಡುಗೆ ಅಪಾರ’ ಎಂದು ಅವರು ತಿಳಿಸಿದರು.<br /> <br /> ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ‘ಶಬ್ದಗಳ ಮೂಲಕ ಕಚಗುಳಿ ಇಡುವ ಪ್ರತಿಭೆ ಡುಂಡಿರಾಜ್. ಇಲ್ಲಿಯವರೆಗೂ ಅವರು ಹಾಸ್ಯ, ಕಚಗುಳಿಯ ಹನಿಗವನ ಬರೆದಿದ್ದಾರೆ. ಇನ್ನು ಸರ್ವಜ್ಞನ ಮಾದರಿಯಲ್ಲಿ ಬರೆಯಲು ಅವರು ಪ್ರಯತ್ನಿಸಬೇಕು’ ಎಂದರು.<br /> <br /> ‘ಹೆಚ್ಚು ಓದಿ ಹೆಚ್ಚು ಬರೆಯುವವರು ಜೋಗಿ. ಬರವಣಿಗೆಯಲ್ಲಿ ಅಪಾರ ಏಕಾಗ್ರತೆ ಸಾಧಿಸಿರುವವರು ಅವರು. ಅವರದ್ದು ಸಮೃದ್ಧವಾದ ಬರವಣಿಗೆ. ಆದರೆ, ಸುರೇಂದ್ರನಾಥ್ ಹೆಚ್ಚು ಓದಿ ಕಡಿಮೆ ಬರೆಯುವವರು. ದಾವಣಗೆರೆ ಪ್ರದೇಶದ ಭಾಷೆಯನ್ನು ತಮ್ಮ ಬರವಣಿಗೆಯಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟವರು ಅವರು’ ಎಂದು ಹೇಳಿದರು.<br /> <br /> ಹನಿಗವಿ ಡುಂಡಿರಾಜ್, ‘ಇದು ವಾಹಿನಿಗಳ ಕಾಲ. ಹೀಗಾಗಿ ನನ್ನ ಹನಿಗವನಗಳ ಸಂಕಲನಕ್ಕೆ ಹನಿವಾಹಿನಿ ಎಂದು ಹೆಸರಿಟ್ಟಿದ್ದೇನೆ. ಹನಿಗವನದಲ್ಲೂ ದಾರ್ಶನಿಕತೆ, ಲೋಕದೃಷ್ಟಿ ಇರುತ್ತದೆ’ ಎಂದರು. ಪುಸ್ತಕಗಳ ಬೆಲೆ: ಚೈತ್ರ ವೈಶಾಖ ಋತು (ಕಾದಂಬರಿ) ₨120, ಜೋಗಿ ರೀಡರ್ (ಲೇಖನ ಸಂಕಲನ) ₨195, ಹನಿವಾಹಿನಿ (ಹನಿಗವಿತೆಗಳು) ₨ 95 ಮತ್ತು ತಾಪತ್ರಯಗಳು (ಕಥಾ ಸಂಕಲನ) ₨ 120.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಹನಿಗವನ ಹಾಗೂ ಚುಟುಕುಗಳು ಸುಭಾಷಿತಗಳಿದ್ದಂತೆ. ಕಿರಿದರಲ್ಲಿ ಹಿರಿಯ ಅರ್ಥ ಹೇಳುವುದು ಹನಿಗವನ ಹಾಗೂ ಚುಟುಕುಗಳ ವೈಶಿಷ್ಟ್ಯ’ ಎಂದು ಸಾಹಿತಿ ಎಂ.ಎನ್.ವ್ಯಾಸರಾವ್ ಅಭಿಪ್ರಾಯಪಟ್ಟರು.</p>.<p>ಅಂಕಿತ ಪುಸ್ತಕ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಜೋಗಿ ಅವರ ‘ಚೈತ್ರ ವೈಶಾಖ ಋತು’, ಎನ್.ಸಂಧ್ಯಾರಾಣಿ ಸಂಪಾದಿಸಿರುವ ‘ಜೋಗಿ ರೀಡರ್’, ಎಚ್.ಡುಂಡಿರಾಜ್ ಅವರ ‘ಹನಿವಾಹಿನಿ’ ಮತ್ತು ಎಸ್.ಸುರೇಂದ್ರನಾಥ್ ಅವರ ‘ತಾಪತ್ರಯಗಳು’ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ಹನಿಗವನ ಹಾಗೂ ಚುಟುಕುಗಳು ನೋಡಲು ಲಘುವಾಗಿ ಕಾಣಬಹುದು. ಆದರೆ, ಅವುಗಳ ಅರ್ಥವಿಸ್ತಾರ ಹಿರಿದಾಗಿರುತ್ತದೆ. ಕನ್ನಡದಲ್ಲಿ ಹನಿಗವನ ಪ್ರಕಾರಕ್ಕೆ ಡುಂಡಿರಾಜ್ ಅವರ ಕೊಡುಗೆ ಅಪಾರ’ ಎಂದು ಅವರು ತಿಳಿಸಿದರು.<br /> <br /> ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ‘ಶಬ್ದಗಳ ಮೂಲಕ ಕಚಗುಳಿ ಇಡುವ ಪ್ರತಿಭೆ ಡುಂಡಿರಾಜ್. ಇಲ್ಲಿಯವರೆಗೂ ಅವರು ಹಾಸ್ಯ, ಕಚಗುಳಿಯ ಹನಿಗವನ ಬರೆದಿದ್ದಾರೆ. ಇನ್ನು ಸರ್ವಜ್ಞನ ಮಾದರಿಯಲ್ಲಿ ಬರೆಯಲು ಅವರು ಪ್ರಯತ್ನಿಸಬೇಕು’ ಎಂದರು.<br /> <br /> ‘ಹೆಚ್ಚು ಓದಿ ಹೆಚ್ಚು ಬರೆಯುವವರು ಜೋಗಿ. ಬರವಣಿಗೆಯಲ್ಲಿ ಅಪಾರ ಏಕಾಗ್ರತೆ ಸಾಧಿಸಿರುವವರು ಅವರು. ಅವರದ್ದು ಸಮೃದ್ಧವಾದ ಬರವಣಿಗೆ. ಆದರೆ, ಸುರೇಂದ್ರನಾಥ್ ಹೆಚ್ಚು ಓದಿ ಕಡಿಮೆ ಬರೆಯುವವರು. ದಾವಣಗೆರೆ ಪ್ರದೇಶದ ಭಾಷೆಯನ್ನು ತಮ್ಮ ಬರವಣಿಗೆಯಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟವರು ಅವರು’ ಎಂದು ಹೇಳಿದರು.<br /> <br /> ಹನಿಗವಿ ಡುಂಡಿರಾಜ್, ‘ಇದು ವಾಹಿನಿಗಳ ಕಾಲ. ಹೀಗಾಗಿ ನನ್ನ ಹನಿಗವನಗಳ ಸಂಕಲನಕ್ಕೆ ಹನಿವಾಹಿನಿ ಎಂದು ಹೆಸರಿಟ್ಟಿದ್ದೇನೆ. ಹನಿಗವನದಲ್ಲೂ ದಾರ್ಶನಿಕತೆ, ಲೋಕದೃಷ್ಟಿ ಇರುತ್ತದೆ’ ಎಂದರು. ಪುಸ್ತಕಗಳ ಬೆಲೆ: ಚೈತ್ರ ವೈಶಾಖ ಋತು (ಕಾದಂಬರಿ) ₨120, ಜೋಗಿ ರೀಡರ್ (ಲೇಖನ ಸಂಕಲನ) ₨195, ಹನಿವಾಹಿನಿ (ಹನಿಗವಿತೆಗಳು) ₨ 95 ಮತ್ತು ತಾಪತ್ರಯಗಳು (ಕಥಾ ಸಂಕಲನ) ₨ 120.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>