ಪೌರಕಾರ್ಮಿಕರನ್ನು ಮರೆತ ಸರ್ಕಾರ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಸ್ವಚ್ಛತಾ ಅಭಿಯಾನ’ ದೇಶದಲ್ಲಷ್ಟೆ ಅಲ್ಲ ವಿದೇಶದಲ್ಲೂ ಗಮನ ಸೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಸ್ಥಳೀಯ ಸಣ್ಣ–ಪುಟ್ಟ ನಾಯಕರು ಕೂಡ ಪೊರಕೆ– ಗುದ್ದಲಿಗಳನ್ನು ಹಿಡಿದು ಮಾಧ್ಯಮಗಳೆದುರು ಸಾಂಕೇತಿಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಈಗೀಗ ಶಾಲಾ– ಕಾಲೇಜುಗಳಿಗೂ ಈ ಅಭಿಯಾನ ವಿಸ್ತರಿಸಿದೆ. ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೊಂದು ಒಳ್ಳೆಯ ಆಂದೋಲನವಾದರೂ, ಪುರಸಭೆಗಳಿಂದ ಮಹಾನಗರಗಳ ಬೀದಿ ಗುಡಿಸಿ, ಕಸ ಎತ್ತುವ ಪೌರ ಕಾರ್ಮಿಕರ ಬಗ್ಗೆ ಇದುವರೆಗೂ ಯಾರೂ ಸೊಲ್ಲೆತ್ತಿಲ್ಲ.Last Updated 24 ನವೆಂಬರ್ 2014, 19:30 IST