ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವಾರ್ತೆ

Last Updated 20 ಅಕ್ಟೋಬರ್ 2014, 8:07 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಬಿಳಿದೇವಾ­ಲಯ ಗ್ರಾಮ ಪಂಚಾಯಿತಿ ವ್ಯಾಪ್ತಿ­ಯಲ್ಲಿ ಕಳೆದ ಮೂರು ವರ್ಷ­ಗಳಿಂ­ದಲೂ ವಸತಿ ಯೋಜನೆಯಡಿ ಅವ್ಯವ­ಹಾರ­ಗಳು ನಡೆಯುತ್ತಿವೆ. ಇದರ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ವಸತಿ ಯೋಜನೆ ನೋಡಲ್ ಅಧಿಕಾರಿಗಳಿಗೆ ಶಾಸಕ ಡಿ.ನಾಗರಾಜಯ್ಯ ಸೂಚನೆ ನೀಡಿದರು.

ಶನಿವಾರ ತಾ.ಪಂ.ಸಭಾಂಗಣದಲ್ಲಿ ನಡೆದ ಕಾರ್ಯಪಡೆ ಸಭೆಯಲ್ಲಿ ಮಾತ­ನಾಡಿದ ತಾ.ಪಂ.ಸದಸ್ಯೆ ಮಂಜುಳಾ, ಮನೆ ನಿರ್ಮಿಸಿಕೊಂಡಿದ್ದರೂ ಫಲಾನು­ಭ­ವಿಗಳಿಗೆ ಸಹಾಯ ಧನ ವಿತ­ರಣೆಯಾಗಿಲ್ಲ. ಕೆಲ ಪಂಚಾಯಿತಿಗಳಲ್ಲಿ  ಗ್ರಾ.ಪಂ.ಅಧ್ಯಕ್ಷ–ಕಾರ್ಯದರ್ಶಿಗಳ ಅಪವಿತ್ರ ಮೈತ್ರಿಯಿಂದ ಅರ್ಹರಿಗೆ ಸವಲತ್ತುಗಳು ದೊರೆಯುವುದಿಲ್ಲ. ಮಾನ­­­ವೀಯತೆ ದೃಷ್ಟಿಯಿಂದ ದುಡಿ­ಯು­ವಂತೆ ಸೂಚಿಸಿದರು.

ಸುರ್ವಣ ಗ್ರಾಮ ಯೋಜನೆಯ­ಡಿಯಲ್ಲಿ ಕಾಮಗಾರಿಗಳು ನಡೆದಿಲ್ಲ ಎಂದು ಹೇರೂರು ತಾ.ಪಂ ಸದಸ್ಯೆ ಮೋಹ­ನಾಂಬ ಹೇಳಿದರು. ಇದಕ್ಕೆ ಶಾಸಕ, ಈ ಬಗ್ಗೆ ವಿಶೇಷ ಸಭೆ ನಡೆಸು­ವುದಾಗಿ ಹೇಳಿದರು. ಪಂಚಾಯಿತಿ ಸದಸ್ಯರ ಅನುದಾ­ನದಡಿ 13 ಕಿ.ಮೀ ಗ್ರಾಮೀಣ ಸಂಪರ್ಕ ರಸ್ತೆ ಡಾಂಬರೀಕರಣ ಹಾಗೂ 23 ಕಿ.ಮೀ ಗ್ರಾಮೀಣ ಸಂಪರ್ಕ ರಸ್ತೆ ಮರು ಡಾಂಬರೀಕರಣಕ್ಕೆ ನಿರ್ಣಯ ಕೈಗೊಳ್ಳ-­ಲಾಯಿತು.

ತಾ.ಪಂ. ಅಧ್ಯಕ್ಷ ನರಸಿಂಹ ಮೂರ್ತಿ, ಉಪಾಧ್ಯಕ್ಷ ಹನುಮಾನಾಯಕ, ಇಒ ಆಂಜನಪ್ಪ, ಜಿ.ಪಂ. ಸದಸ್ಯರಾದ ಡಾ.­ಬಿ.­ಎನ್.ರವಿ, ದೊಡ್ಡಯ್ಯ, ತಾ.ಪಂ.­ಸದಸ್ಯರಾದ ವೆಂಕಟಲಕ್ಷ್ಮಮ್ಮ, ಕೆಂಪ­ಗೂಳಿಗೌಡ, ಕಾಮನಹಳ್ಳಿ ರಾಮಣ್ಣ, ಲೋಕೇಶ್, ಎಇಇ ವಿಜಯ್ ಗೌಡ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT