ಬೆಂಗಳೂರು: ‘ನಗರದಲ್ಲಿ ಕಪ್ಪೆ ಹಾಗೂ ಹಲ್ಲಿಗಳ ಸಂಖ್ಯೆ ತುಂಬಾ ಕಡಿಮೆ ಆಗಿದ್ದು, ಇದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಿದೆ. ಸಾಂಕ್ರಾಮಿಕ ರೋಗ ಹೆಚ್ಚಾಗಲು ಈ ಬೆಳವಣಿಗೆಯೇ ಕಾರಣವಾಗಿದೆ’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಯೊಬ್ಬರು ವಿಶ್ಲೇಷಿಸಿದರು.
ಬಿಬಿಎಂಪಿ ಕಚೇರಿಯಲ್ಲಿ ಶುಕ್ರವಾರ ಆರೋಗ್ಯ ಸಚಿವ ಯು.ಟಿ. ಖಾದರ್ ನಡೆಸಿದ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಉಪ ನಿರ್ದೇಶಕ (ಆರೋಗ್ಯ) ಡಾ. ಪ್ರಕಾಶಕುಮಾರ್ ಈ ವಿಶ್ಲೇಷಣೆ ಯನ್ನು ಮಾಡಿದರು.
ಸಭೆಯಲ್ಲಿ ಮಾತನಾಡಿದ ಸಚಿವ ಖಾದರ್, ‘ಸಾಂಕ್ರಾಮಿಕ ರೋಗ ಹರಡದಂತೆ ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸುವ ಅಗತ್ಯವಿದೆ. ಸಿಕ್ಕಸಿಕ್ಕಲ್ಲಿ ಫಾಗಿಂಗ್ ಮಾಡುವ ಬದಲು ಸೊಳ್ಳೆಗಳ ಉತ್ಪತ್ತಿ ಎಲ್ಲಿ ಹೆಚ್ಚಾಗುತ್ತಿದೆಯೋ ಅಲ್ಲಿ ಮಾಡ ಬೇಕು’ ಎಂದು ಸಲಹೆ ನೀಡಿದರು.
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ವರ್ಷ 1,019 ಡೆಂಗೆ ಪ್ರಕರಣಗಳು ವರದಿಯಾಗಿದ್ದವು. ಈ ಸಲ 379 ಪ್ರಕರಣಗಳು ಮಾತ್ರ ವರದಿಯಾಗಿವೆ. ಪ್ರಕರಣಗಳ ಸಂಖ್ಯೆ ಇಳಿಮುಖ ವಾದರೂ ಅಧಿಕಾರಿಗಳು ಮೈಮರೆ ಯುವ ಹಾಗಿಲ್ಲ’ ಎಂದು ಎಚ್ಚರಿಸಿ ದರು.
‘ಸ್ವಚ್ಛ ಭಾರತ, ಸ್ವಚ್ಛ ಬೆಂಗಳೂರು’
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ‘ಸ್ವಚ್ಛ ಭಾರತ’ ಆಂದೋಲನ ಸೆ. 25ರಿಂದ ಅ. 5ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲೂ ನಡೆಯಲಿದೆ. ಈ ಸಂಬಂಧ ಮೇಯರ್ ಎನ್. ಶಾಂತಕುಮಾರಿ ಶುಕ್ರವಾರ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳು ಸೂಚಿಸಿದರು. ಉಪಮೇಯರ್ ಕೆ.ರಂಗಣ್ಣ, ಆಯುಕ್ತ ಎಂ.ಲಕ್ಷ್ಮೀನಾರಾಯಣ ಮತ್ತಿತರರು ಹಾಜರಿದ್ದರು.