‘ಅಸೋಶಿಯನ್ ಆಫ್ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಅಂಡರ್ಟೇಕಿಂಗ್’ನಿಂದ ನವದೆಹಲಿಯಲ್ಲಿ ಇತ್ತಿಚಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೋಮನಕಟ್ಟಿ ಸೇರಿದಂತೆ ದೇಶದ ವಿವಿಧ ಭಾಗಗಳ 42 ಚಾಲಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಎಂ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಶೇಖರ ಚನ್ನೆ, ಎ.ಎಸ್.ಆರ್.ಟಿ.ಯು. ಉಪ ನಿರ್ದೇಶಕ ರಿತೇಶ ಕುಮಾರ ಗೋಯಲ್, ಅಲ್ಕ ಉಪಾಧ್ಯ ಹಾಜರಿದ್ದರು.