ಕಲ್ಯಾಣಿಯಲ್ಲಿ ನೀರಿದ್ದಾಗ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿತ್ತು. ಬೇಸಿಗೆಯಲ್ಲಿ ವಿವಿಧ ಭಾಗದಿಂದ ಜನ ಬಂದು ಈಜಾಡುತ್ತಿದ್ದರು. ಆದರೆ, ಅನೇಕ ವರ್ಷಗಳಿಂದ ಇದ್ಯಾವುದು ನಡೆಯುತ್ತಿರಲಿಲ್ಲ. ಹೂಳು ತೆಗೆದು ಅಭಿವೃದ್ಧಿಗೊಳಿಸುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಹಿಂದೆ ನಡೆಯುತ್ತಿದ ಚಟುವಟಿಕೆಗಳು ಮತ್ತೆ ಆರಂಭವಾಗಬಹುದು ಎನ್ನುತ್ತಾರೆ ಸ್ಥಳೀಯರು.