ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಭಯ ತೋರಿಸಿ ಚಿನ್ನಾಭರಣ ಕಳ್ಳತನ: ಆರೋಪಿ ಬುಡಬುಡಕೆ ಕೃಷ್ಣಪ್ಪ ಬಂಧನ

Last Updated 14 ಸೆಪ್ಟೆಂಬರ್ 2022, 5:09 IST
ಅಕ್ಷರ ಗಾತ್ರ

ಬೆಂಗಳೂರು: ‘ಮನೆಯಲ್ಲಿ ಸಾವಾಗುತ್ತದೆ’ ಎಂದು ಹೇಳಿ ಭಯವನ್ನುಂಟು ಮಾಡಿ ಪೂಜೆ ನೆಪದಲ್ಲಿ ಮಹಿಳೆಯೊಬ್ಬರ ಚಿನ್ನಾಭರಣ ಕದ್ದೊಯ್ದಿದ್ದ ಆರೋಪಿ ಆನಂದ್ ಅಲಿಯಾಸ್ ಬುಡಬುಡಕೆ ಕೃಷ್ಣಪ್ಪ (36) ಅವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಹೆಗ್ಗನಹಳ್ಳಿ ನಿವಾಸಿ ಆನಂದ್, ಕೆಪಿಎಸ್‌ಸಿ ಬಡಾವಣೆಯಲ್ಲಿ ನೆಲೆಸಿರುವ ನಿವೃತ್ತ ನೌಕರರೊಬ್ಬರ ಪತ್ನಿಯ ಚಿನ್ನದ ಉಂಗುರ ಹಾಗೂ ಸರ ಕದ್ದೊಯ್ದಿದ್ದ. ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಹಿಳೆಯ ಮನೆಯಲ್ಲಿ ವೃದ್ಧರೊಬ್ಬರು ತೀರಿಕೊಂಡಿದ್ದರು. ಅದನ್ನು ಗಮನಿಸಿ ಮನೆಗೆ ಬಂದಿದ್ದ ಆರೋಪಿ, ‘ಈ ಮನೆಯಲ್ಲಿ ಮತ್ತೆ 3 ಸಾವಾಗುತ್ತದೆ. ಪೂಜೆ ಮಾಡಿದರೆ, ಸಾವು ತಡೆಯಬಹುದು’ ಎಂದಿದ್ದ. ‍ಪೂಜೆ ನೆಪದಲ್ಲಿ ಚಿನ್ನಾಭರಣ ಬಿಚ್ಚಿಸಿದ್ದ ಆರೋಪಿ, ಧ್ಯಾನ ಮಾಡುವಂತೆ ಮಹಿಳೆಗೆ ಹೇಳಿ ಪರಾರಿಯಾಗಿದ್ದ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT