‘ಮಹಿಳೆಯ ಮನೆಯಲ್ಲಿ ವೃದ್ಧರೊಬ್ಬರು ತೀರಿಕೊಂಡಿದ್ದರು. ಅದನ್ನು ಗಮನಿಸಿ ಮನೆಗೆ ಬಂದಿದ್ದ ಆರೋಪಿ, ‘ಈ ಮನೆಯಲ್ಲಿ ಮತ್ತೆ 3 ಸಾವಾಗುತ್ತದೆ. ಪೂಜೆ ಮಾಡಿದರೆ, ಸಾವು ತಡೆಯಬಹುದು’ ಎಂದಿದ್ದ. ಪೂಜೆ ನೆಪದಲ್ಲಿ ಚಿನ್ನಾಭರಣ ಬಿಚ್ಚಿಸಿದ್ದ ಆರೋಪಿ, ಧ್ಯಾನ ಮಾಡುವಂತೆ ಮಹಿಳೆಗೆ ಹೇಳಿ ಪರಾರಿಯಾಗಿದ್ದ’ ಎಂದೂ ತಿಳಿಸಿದರು.