ಬೆಂಗಳೂರು: ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಗೋಲ್ಡನ್ ಕ್ರೀಪರ್ ಸಂಸ್ಥೆ ಆಯೋಜಿಸಿರುವ ‘ದಿ ಜ್ಯುವೆಲರಿ’ ಭಾರತೀಯ ಒಡವೆಗಳ ಉತ್ಸವ ಆರಂಭವಾಗಿದ್ದು, ಇದೇ 31ರವರೆಗೂ ಮೇಳ ನಡೆಯಲಿದೆ.
ನಗರದಲ್ಲಿ ಶುಕ್ರವಾರ ಚಿತ್ರನಟಿ ಶ್ರೀಲೀಲಾ ಹಾಗೂ ಅರ್ಪಿತಾ ಲಾವಣ್ಯ ಬಂಗಾರಪ್ಪ ಇತರರು ಚಾಲನೆ ನೀಡಿದರು. ಗೋಲ್ಡನ್ ಕ್ರೀಪರ್ ಸಂಸ್ಥೆಯ ಜಗದೀಶ ಬಿ.ಎನ್ ಮತ್ತು ಹೇಮಲತಾ ಜಗದೀಶ್ ಇದ್ದರು.
ದೇಶದ 40 ಅಗ್ರ ಆಭರಣ ತಯಾರಕರು ಮೇಳದಲ್ಲಿ ಭಾಗವಹಿಸಿದ್ದಾರೆ. ಎಂಟು ಕೆಜಿ ಚಿನ್ನದಿಂದ ತಯಾರಿಸಿರುವ ತಿರುಪತಿ ತಿರುಮಲ ದೇವಾಲಯದ ಮಾದರಿ ಮೇಳದ ಪ್ರಮುಖ ಆಕರ್ಷಣೆಯಾಗಿದೆ.