ಎರಡನೇ ದಿನವಾದ ಶನಿವಾರ ಕೂಡ ವಿಶೇಷ ಪ್ರಾರ್ಥನೆ, ದೈವ ಸಂದೇಶ ಪ್ರವಚನ, ಭಜನಾ ಸ್ಪರ್ಧೆಗಳು ನಡೆದವು. ಭಾನುವಾರವೂ ಮುಂದುವರೆಯಲಿವೆ. ಭಜನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುತ್ತದೆ. ಕರ್ನಾಟಕದ ಬಿಷಪ್ ಎನ್.ಎಲ್. ಕರ್ಕರೆ ಅವರು ಕೂಡ ಪಾಲ್ಗೊಳ್ಳುವರು. ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳನ್ನು ರೆವರೆಂಡ್ ನೆಲ್ಸನ್ ಸುಮಿತ್ರ, ರೆವರೆಂಡ್ ಇಮ್ಯಾನುವೆಲ್ ಪ್ರದೀಪ್, ರೆವರೆಂಡ್ ತುಕಾರಾಂ, ರೆವರೆಂಡ್ ಸೈಮನ್, ರೆವರೆಂಡ್ ಜೈಪಾಲ್ ಅವರು ನಡೆಸಿಕೊಟ್ಟರು.