ರಸ್ತೆ ಅತಿಕ್ರಮಣ ತೆರವಿನ ನಂತರ ವಿಶಾಲವಾದ ರಸ್ತೆ ಜನ ಸಂಚಾರಕ್ಕೆ ಲಭ್ಯವಾಗಿದೆ. ಇದರಿಂದ ನಾಗರಿಕರು, ವಾಹನ ಸವಾರರು, ದ್ವಿಚಕ್ರ ಸವಾರರು ಖುಷಿ ಪಡುತ್ತಿದ್ದಾರೆ. ಹಲವು ಅಂಗಡಿ ಮಾಲೀಕರು ಸ್ವಾಗತಿಸಿದ್ದಾರೆ. ಮೊದಲು ಅಂಗಡಿಯಲ್ಲಿ ಕುಳಿತುಕೊಳ್ಳುವುದಕ್ಕೂ ಆಗುತ್ತಿರಲಿಲ್ಲ. ಅಂಗಡಿ ಒಳಗಡೆ ಎಲ್ಲೆಂದರಲ್ಲಿ ರಸ್ತೆ ಮೇಲಿನ ಕೆಂಪು ಧೂಳು ತುಂಬಿಕೊಳ್ಳುತ್ತಿತ್ತು. ಈಗ ರಸ್ತೆ ಅಗಲವಾಗಿದ್ದರಿಂದ ವಾಹನ ಸಂಚರಿಸಿದರೂ ಧೂಳು ಬರುತ್ತಿಲ್ಲ. ಸ್ವಚ್ಛವಾದ ವಾತಾವರಣ ನಿರ್ಮಾಣವಾಗಿದೆ ಎಂದು ಬಟ್ಟೆ ವ್ಯಾಪಾರಿ ಪ್ರಭು ನುಡಿಯುತ್ತಾರೆ.