ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆ ನೀಡುವಲ್ಲಿ ಆರೋಗ್ಯಾಧಿಕಾರಿ ಗಳು ಸಂಪೂರ್ಣ ವಿಫಲರಾಗಿದ್ದಾರೆ. ಅಪಘಾತ, ವಿಷ ಜಂತುಗಳ ಕಡಿತ, ಜ್ವರ, ಡೆಂಗಿ, ಮಲೇರಿಯಾ, ಚಿಕೂನ್ಗುನ್ಯಾದಂತಹ ರೋಗಗಳು ಕಂಡು ಬಂದರೆ ಉತ್ತಮ ಚಿಕಿತ್ಸೆಗೆ ಪರದಾಡುವಂತಾಗಿದೆ. ಹೆರಿಗೆ ನೋವು ಕಾಣಿಸಿಕೊಂಡರೆ ತುರ್ತು ಚಿಕಿತ್ಸೆ ದೊರೆಯದೇ ಜೀವ ಕೈಯಲ್ಲಿ ಹಿಡಿದು ಬೇರೆ ಕಡೆಗೆ ಹೋಗಬೇಕಾಗಿದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಕೆ.ಟಿ.ನಿಜಲಿಂಗಪ್ಪ ಅಸಮಾಧಾನ ವ್ಯಕ್ತಪಡಿಸಿದರು.