ಬಣವೆಗೆ ನೀರು ಇಳಿಯದಂತೆ ಪ್ಲಾಸ್ಟಿಕ್ ಬ್ಯಾನರ್ ಹೊದಿಸಿ, ಅದು ಗಾಳಿಗೆ ಹಾರದಂತೆ ಸುತ್ತಲು ಸಣ್ಣ ಕಲ್ಲುಗಳನ್ನು ಇಟ್ಟು ಸಾಕಷ್ಟು ಜಾಗೃತಿ ವಹಿಸಿದ್ದಾರೆ. ಮಳೆಗಾಲದಲ್ಲಿ ಈ ಗೋಟುಗಲ್ಲಿನ ಸುತ್ತಲು ನೀರು ನಿಲ್ಲುತ್ತದೆ, ಆದರೆ ಮೇವು ಮಾತ್ರ ಹಾನಿಯಾಗುವುದಿಲ್ಲ. ಇದು ಟಾಕರೆಪ್ಪ ಅವರ ದೂರದೃಷ್ಟಿ ಎನ್ನಬಹುದು.