ಪ್ರಕೃತಿ ಸಿರಿಯ ತವರು, ಬೆಟ್ಟಗುಡ್ಡಗಳ ಪುಟ್ಟ ಗ್ರಾಮ ಸೂರ್ಲಬ್ಬಿಯಲ್ಲಿ ಹೆಚ್ಚಿನ ರೈತರು ತುಂಡು ಭೂಮಿಯನ್ನೇ ಆಶ್ರಯಿಸಿ ಬದುಕು ಸಾಗಿಸುತ್ತಿದ್ದಾರೆ. ಇದರಲ್ಲಿಯೇ ವರ್ಷವಿಡೀ ಕೃಷಿ ಚಟುವಟಿಕೆಗಳನ್ನು ನಡೆಸುವ ಇವರು, ಮನೆಗಳಿಗಾಗುವಷ್ಟು ಭತ್ತವನ್ನು ಬೆಳೆದ ನಂತರ ತರಕಾರಿಯನ್ನೂ ಬೆಳೆಯುತ್ತಾರೆ. ಅತಿವೃಷ್ಟಿಯ ಕಾರಣ ಹಲವರು ಇರುವ ಕೃಷಿ ಭೂಮಿಯನ್ನು ಕಳೆದುಕೊಂಡಿದ್ದಾರೆ. ಭೂ ಕುಸಿತದಿಂದಾಗಿ ಹೆಚ್ಚಿನವರ ಕಾಫಿ ತೋಟ ಮತ್ತು ಗದ್ದೆಗಳು ನಷ್ಟವಾಗಿವೆ. ಬೆಳೆಯನ್ನು ಕಳೆದುಕೊಂಡು ಇಲ್ಲಿನವರು ಬರಿಗೈಯಾಗಿ ಮುಂದಿನ ಜೀವನದ ಆತಂಕ ಎದುರಿಸುವಂತಾಗಿದೆ.