ಅದಕ್ಕೂ ಬಗ್ಗದ ಗ್ರಾಮಸ್ಥರು, ಮೊದಲು ನಮಗೆ ಬೆಳೆ ಪರಿಹಾರ ನೀಡಿ, ಆಮೇಲೆ ಮರಳನ್ನ ತೆಗೆದುಕೊಂಡು ಹೋಗಿ ಎಂದು ಪಟ್ಟುಹಿಡಿದರು. ಕಾಲೂರಿನಲ್ಲಿ ಹರಿಯೋ ನದಿಗೆ ಸೇತುವೆ ನಿರ್ಮಿಸಿ ಕೊಡಲು ಸಾಧ್ಯವಾಗಿಲ್ಲ. ಮಳೆ ಬಂದರೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಸಾಧ್ಯವಿಲ್ಲ ಎಂದು ತಹಶೀಲ್ದಾರ್ಗೂ ಪರಿಸ್ಥಿತಿ ತಿಳಿಸಿಕೊಟ್ಟರು.
ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಗ್ರಾಮಸ್ಥರು ಮಾತ್ರ ಮರಳು ತೆಗೆಯಲು ಬಿಡಲಿಲ್ಲ. ಕಾರ್ಮಿಕರ ದಿನದ ರಜೆಯಲ್ಲೂ ದಾಳಿಗೆ ಕಾಲೂರಿಗೆ ಬಂದಿದ್ದ ಅಧಿಕಾರಿಗಳು ಬರಿಗೈಯಲ್ಲಿ ವಾಪಸ್ ಆಗಿದ್ದಾರೆ