‘ಭಾರಿ ಮಳೆಗೆ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗೆ ಕೊಳೆರೋಗ ತಗುಲಿದೆ; ರೈತರಿಗೆ ಅಪಾರ ನಷ್ಟವುಂಟಾಗಿದೆ. ಇಲ್ಲಿ ಮಳೆ ಬಿದ್ದರೆ ಅದರ ಲಾಭ ಪಡೆಯುವುದು ಮೈಸೂರು, ಮಂಡ್ಯ ಹಾಗೂ ತಮಿಳುನಾಡು ಭಾಗದ ಜನರು. ಜಿಲ್ಲೆಯಲ್ಲಿ ಇಷ್ಟೆಲ್ಲಾ ನಷ್ಟವಾಗುತ್ತಿರುವಾಗ ಮೊದಲು ಪರಿಹಾರ ಕೊಡಬೇಕಿದ್ದು ಕೊಡಗಿಗೆ ಸ್ವಾಮಿ. ಆದರೆ, ನಮ್ಮನ್ನು ಮರೆತಿದ್ದೀರಲ್ಲಾ ಸ್ವಾಮಿ’ ಎಂದು ಬಾಲಕ ಹೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.