ಈ ಕುರಿತು ಶರಣಪ್ಪ ಮೇಟಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ರಾಷ್ಟ್ರದಲ್ಲಿ ಕಾಂಗ್ರೆಸ್ನ ಹೀನಾಯ ಸ್ಥಿತಿ ಹಾಗೂ ದ್ವಂದ್ವ ನೀತಿಗೆ ಬೇಸತ್ತು ತಟಸ್ಥ ನೀತಿ ಅನುಸರಿಸುತ್ತಿರುವೆ. ಬಿಜೆಪಿ ಅಭ್ಯರ್ಥಿಗಳ ಭೇಟಿ, ಪ್ರಧಾನಿ ನರೇಂದ್ರ ಮೋದಿ ಆಡಳಿತದ ವೈಖರಿ, ವಿಶ್ವದ ಭೂಪಟದಲ್ಲಿ ಭಾರತ ತಲೆ ಎತ್ತಿ ನಿಲ್ಲುವಂತೆ ಮಾಡಿದ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ ಎಂಬುದು ತಮ್ಮ ಕನಸು. ಹೈಕಮಾಂಡ್ ಒಪ್ಪಿದಲ್ಲಿ ಶೀಘ್ರದಲ್ಲಿಯೇ ಬಿಜೆಪಿ ಸೇರ್ಪಡೆ ಆಗುವುದು ಖಚಿತ’ ಎಂದು ತಿಳಿಸಿದರು.