ಕನಕಪುರ: ನಗರದ ಬೂದಿಕೇರಿ ಬೀದಿ ದೀಪ ನಿಯಂತ್ರಿಸುವ ಮೈನ್ ಸ್ವಿಚ್ ಹಾಳಾಗಿದೆ. ಇದರಿಂದ ರಸ್ತೆಯಲ್ಲಿ ಕತ್ತಲು ಆವರಿಸಿ ಜನರು ಸಂಚಾರ ಮಾಡುವುದು ಕಷ್ಟವಾಗಿದೆ ಎಂದು ಬೂದಿಕೇರಿ ನಿವಾಸಿಗಳು ಆರೋಪಿಸಿದ್ದಾರೆ.
ಅಯ್ಯಪ್ಪಸ್ವಾಮಿ ದೇವಾಲಯದಿಂದ ಬಸ್ ನಿಲ್ದಾಣದ ಸರ್ಕಲ್ವರೆಗೂ ಜೋಡಿ ರಸ್ತೆ ಮಾಡಿ ಮಧ್ಯದಲ್ಲಿ ವಿಭಜಕ ನಿರ್ಮಿಸಿ ಜೋಡಿ ರಸ್ತೆಗೆ ಮಧ್ಯದಲ್ಲಿ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿತ್ತು. ಈಗ ಹಾಳಾದರೂ ಸರಿಪಡಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.
ನಗರಸಭೆ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಬೀದಿ ಸರಿಪಡಿಸಬೇಕೆಂದು ಬೂದಿಕೇರಿ ರಸ್ತೆ ಚಾಂದ್ ಪಾಷ ಒತ್ತಾಯಿಸಿದ್ದಾರೆ.