ಇದನ್ನು ಎಣಿಸಲು ಚುನಾವಣೆ ಸಿಬ್ಬಂದಿ ಹೈರಾಣಾದ ಘಟನೆ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ನಡೆಯಿತು. ‘ನಾನೊಬ್ಬ ಬಡ ರೈತ, ಕೂಲಿ ನಾಲಿಯಿಂದ ಬಂದ ಹಣವನ್ನು ಕಳೆದ 5 ವರ್ಷಗಳಿಂದ ಸಂಗ್ರಹಿಸಿಟ್ಟಿದ್ದೇನೆ. ಠೇವಣಿ ಇಡಲು ನನ್ನ ಹತ್ತಿರ ಗರಿ ಗರಿ ನೋಟಿಲ್ಲ. ಇದ್ದ ಚಿಲ್ಲರೆ ಹಣ ತಂದಿದ್ದೇನೆ’ ಎಂದು ಎಎಪಿ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ ಹೇಳಿದಾಗ ಚುನಾವಣೆ ಸಿಬ್ಬಂದಿ ನಗೆಗಡಲಲ್ಲಿ ತೇಲಿದರು.