ಕೊನೆಗೂ ಕದ್ದ ಚಿನ್ನವು ಅಗತ್ಯವುಳ್ಳವರಿಗೆ ಸಿಕ್ಕಿತೇ? ರಾಮಾಚಾರಿಗೆ ನಂದಿನಿ ಹೇಗೆ ಒಲಿದಳು ಎಂಬುದು ಚಿತ್ರದ ಕಥೆ. ಚಿನ್ನ ಕಳ್ಳತನ ಮಾಡಿ ಅದನ್ನು ಯಾರದೋ ತಲೆಗೆ ಕಟ್ಟಿ ತಪ್ಪಿಸಿಕೊಳ್ಳುವುದು ರಾಮಾಚಾರಿಯ ‘ಬುದ್ಧಿವಂತಿಕೆ’. ಒಂದೇ ರೀತಿಯ ಘಟನೆಗಳು ಮರುಕಳಿಸುವುದು, ಕರ್ಮದ ಫಲ ಬೆಂಬಿಡದೆ ಕಾಡಿ ಕೊನೆಗೂ ಮುಂದುವರಿಯುವುದು ಚಿತ್ರ ಹೇಳಿದ ಕರ್ಮ ಸಿದ್ಧಾಂತ. ಯಾವುದೇ ತರ್ಕ ಪ್ರಶ್ನಿಸದೆ, ಕಥೆಯ ಹರಿವು, ಒಂದಕ್ಕೊಂದು ಕೊಂಡಿ ಎಲ್ಲಿದೆ ಎಂದೆಲ್ಲಾ ಹುಡುಕುವುದಿಲ್ಲವೆಂದಾದರೆ ಎರಡೂವರೆ ಗಂಟೆ ಕಳೆಯಲಡ್ಡಿಯಿಲ್ಲ.