ಸಾವಿರ ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಮಹಾಕ್ಷೇತ್ರ ವಸಂತಪುರ. ಬೆಂಗಳೂರಿನಿಂದ 1-2 ಕಿ.ಮೀ. ದೂರ ಇರುವ ಈ ಕ್ಷೇತ್ರ ಮಾಂಡವ್ಯ ಮಹರ್ಷಿಗಳಿಂದ ಪ್ರತಿಷ್ಠಾಪನೆಗೊಂಡಿದೆ. ಸ್ವಾಮಿಯ ದೇಗುಲದಲ್ಲೀಗ ದೀಪಾವಳಿ ಸಂಭ್ರಮ.
ಹೆಚ್ಚಿನ ದೇಗುಲಗಳಲ್ಲಿ ವೆಂಕಟೇಶ್ವರ ಬಲಗೈ ಚಾಚಿ ನಿಂತಿದ್ದರೆ, ಇಲ್ಲಿ ಮಾತ್ರ ಆತ ಅಭಯ ಹಸ್ತ ತೋರಿ ನಿಂತಿರುವುದು ವಿಶೇಷ. ವಲ್ಲಭರಾಯ ಸ್ವಾಮಿ ಶ್ರೀದೇವಿ, ಭೂದೇವಿಯೊಡನೆ ವಸಂತ ಸ್ನಾನವನ್ನು ಮಾಡಿರುವುದರಿಂದ ಈ ಸ್ಥಳಕ್ಕೆ ವಸಂತಪುರವೆಂದು ಹೆಸರು.
ಮದುವೆ ಆಗದೆ ಇರುವವರು ಈ ದೇವರ ಹತ್ತಿರ ಕಂಕಣ ಕಟ್ಟಿಸಿಕೊಂಡರೆ ೪೮ ದಿನಗಳಲ್ಲಿ ಮದುವೆ ಆಗುತ್ತದೆ. ಶ್ರೀ ಗೋಪಾಲಕೃಷ್ಣನಿಗೆ ರೋಹಿಣಿ ನಕ್ಷತ್ರದಲ್ಲಿ ಹದಿನಾರು ವಾರಗಳು ಹಾಲಿನ ಅಭಿಷೇಕ ಮಾಡಿಸಿ ಆ ತೀರ್ಥವನ್ನು ಸೇವಿಸಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಇದೆ.
ಈ ಸ್ಥಳದ ಪುರಾಣವನ್ನು ಯಾರು ಓದುತ್ತಾರೋ, ಕೇಳುತ್ತಾರೋ ಅವರಿಗೆ ಆಯುಷ್ಯ, ಆರೋಗ್ಯ, ಐಶ್ವರ್ಯ, ಭಾಗ್ಯ, ಕೀರ್ತಿ ಎಲ್ಲವೂ ಸಿದ್ಧಿಸುತ್ತದೆ ಎಂಬುದು ಭಕ್ತರ ನಂಬಿಕೆ.