ಕಾರ್ತಿಕ ಮಾಸದ ಕೊನೆಯ ಸೋಮವಾರ ಬಸವನಗುಡಿಯ ದೊಡ್ಡಗಣಪನಿಗೆ ಕಡಲೆಕಾಯಿಯ ನೈವೇದ್ಯ. ನಗರದ ಸುತ್ತಲಿನ ಹಳ್ಳಿಗಳಿಂದ ಬಸವನಗುಡಿಗೆ ಬಂದು ಮೂರ್ನಾಲ್ಕು ದಿನ ರಸ್ತೆ ಬದಿಯಲ್ಲೇ ಕಡಲೆಕಾಯಿ ಮಾರುವ ರೈತರ ಪಾಲಿಗೆ ಗಣಪನಿಗೆ ಹರಕೆ ಸಲ್ಲಿಸಿದ ತೃಪ್ತಿ.
ಪರಿಷೆಯ ನೆಪದಲ್ಲಿ ನಗರದ ಜನಕ್ಕೆ ಜಾತ್ರೆಯ ಸಂಭ್ರಮ. ಜಾತ್ರೆ ಎಂದ ಮೇಲೆ ಅಲ್ಲಿ ನೂರಾರು ಆಕರ್ಷಣೆ ಇದ್ದೇ ಇರುತ್ತದೆ. ಕಡಲೆಕಾಯಿ ಪರಿಷೆಯೂ ಇದರಿಂದ ಹೊರತಾಗಿಲ್ಲ. ಪರಿಷೆಯಲ್ಲಿ ಕಂಡ ಈ ಸಂಭ್ರಮದ ದೃಶ್ಯಗಳನ್ನು ಸೆರೆಹಿಡಿದವರು ವಿಶ್ವನಾಥ್ ಸುವರ್ಣ
***
ಕಡಲೆಕಾಯಿ ಕೊಳ್ಳಲು ಮುಗಿಬಿದ್ದ ಮಹಿಳೆಯರು
**
ಈ ಮಗುವಿಗೆ ಕಡಲೆಕಾಯಿಯೇ ಆಟದ ವಸ್ತು
**
ಪರಿಷೆಯ ಅಂಗಳದಲ್ಲಿ ಚಿಣ್ಣರ ಆಟ, ಊಟ, ನಿದ್ದೆ
**
ಅಮ್ಮ ಬ್ಯಾಗಿನ ವ್ಯಾಪಾರ ಮಾಡುತ್ತಿದ್ದರೆ ಮಗುವಿಗೆ ಕಡಲೆ ಮೆಲ್ಲುವ ಸಂಭ್ರಮ