ದುಬೈ: ವಾಹನದಲ್ಲಿ ಪತ್ನಿಯ ಶವ ಸಾಗಿಸಲು ಹಣವಿಲ್ಲದೆ ಹೆಗಲ ಮೇಲೆಯೇ 10 ಹೊತ್ತು ಸಾಗಿದ ಒಡಿಶಾದ ವ್ಯಕ್ತಿಗೆ ನೆರವು ನೀಡಲು ಬಹರೇನ್ ಸರ್ಕಾರ ಮುಂದೆ ಬಂದಿದೆ.
ಮೃತ ಅಮಂಗ್ ದೇವಿಯನ್ನು ಪತಿ ದಾನಾ ಮಾಂಝಿ ಅವರು ಹೆಗಲ ಮೇಲೆ ಹೊತ್ತುಕೊಂಡು ಸಾಗಿದ ಮಾಧ್ಯಮ ವರದಿಗಳನ್ನು ಗಮನಿಸಿದ ಬಹರೇನ್ ಸರ್ಕಾರ ಹಣಕಾಸು ನೆರವು ನೀಡಲಿದೆ. ಈ ಬಗ್ಗೆ ಬೆಹರಿನ್ನಲ್ಲಿರುವ ಭಾರತದ ರಾಯಭಾರಿಗೆ ಪ್ರಧಾನಿ ಪ್ರಿನ್ಸ್ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಅವರ ಕಚೇರಿಯಿಂದ ಅಧಿಕೃತ ಮಾಹಿತಿ ಬರಲಿದೆ.
ನವದೆಹಲಿಯಲ್ಲಿರುವ ಬಹರೇನ್ ರಾಯಭಾರಿ ಕಚೇರಿ ಮೂಲಕ ಮಾಂಝಿ ಕುಟುಂಬಕ್ಕೆ ಹಣದ ನೆರವು ದೊರೆಯಲಿದೆ.
ಶವ ಸಾಗಿಸಲು ಹೆಣಗಾಡಿ ಹೊತ್ತು ಸಾಗಿಸಿದ ವರದಿ ನೋಡಿದ ಪ್ರಧಾನಿ ಖಲೀಫಾ ಹಣ ನೀಡುವ ತೀರ್ಮಾನವನ್ನು ಕೈಗೊಂಡಿದ್ದಾರೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.