ಬೆಂಗಳೂರು: ‘ಅಧಿಕಾರ ಸಿಗುವವರೆಗೂ ನಮ್ಮ ಜನಾಂಗ ಎಂದು ಹೇಳಿಕೊಂಡು ತಿರುಗುವ ರಾಜಕಾರಣಿಗಳು, ಕುರ್ಚಿ ಸಿಕ್ಕ ನಂತರ ಎಲ್ಲವನ್ನು, ಎಲ್ಲರನ್ನು ಮರೆತು ಸಾಗುತ್ತಾರೆ’ ಎಂದು ನಂಜಾವಧೂತ ಸ್ವಾಮೀಜಿ ಕಿಡಿಕಾರಿದರು.
ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಜನಪದ ಉತ್ಸವ’ ಹಾಗೂ ರಾಜ್ಯಮಟ್ಟದ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಾರ್ಯಕ್ರಮಕ್ಕೆ ಬರುತ್ತೇನೆಂದು ಒಪ್ಪಿಕೊಂಡ ಮೇಲೆ ಬರಬೇಕು. ಇಲ್ಲದಿದ್ದರೆ ಬರುವುದಿಲ್ಲ ಎಂದು ನೇರವಾಗಿ ಹೇಳಬೇಕು’ ಎಂದರು.
9 ಸಾಧಕರಿಗೆ ಸನ್ಮಾನ ಮಾಡಲಾಯಿತು. ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿಯಲ್ಲಿ ಶೇ 99ಕ್ಕಿಂತ ಹೆಚ್ಚುಅಂಕ ಪಡೆದ 35 ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಜತೆಗೆ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ 400 ವಿದ್ಯಾರ್ಥಿ
ಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.