ಬೆಂಗಳೂರು: ಕೆರೆ ಒತ್ತುವರಿ ಮಾಡಿದ ಆರೋಪಕ್ಕೆ ಗುರಿಯಾಗಿರುವ ಮಾನ್ಯತಾ ಟೆಕ್ಪಾರ್ಕ್, ಬಾಗಮಾನೆ ಟೆಕ್ಪಾರ್ಕ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಇದೇ 25 ಮತ್ತು 26ರಂದು ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಕೆರೆ ಒತ್ತುವರಿ ತನಿಖೆಗೆ ರಚಿಸಿದ ಸದನ ಸಮಿತಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಅವರು ತಿಳಿಸಿದರು.
ಕೆರೆ ಒತ್ತುವರಿ ಮಾಡಿರುವವರ ಪಟ್ಟಿಯಲ್ಲಿ ಇರುವ ದೊಡ್ಡ ಕಂಪೆನಿಗಳ ಅಪಾರ್ಟ್ಮೆಂಟ್, ವಾಣಿಜ್ಯ ಸಮುಚ್ಚಯ ಗಳಿಗೆ ಸಮಿತಿ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಅವರು ವಿವರಿಸಿದರು.
ದಾಸರಹಳ್ಳಿಯ ಬ್ರಿಗೇಡ್ ಗ್ರೂಪ್ ಹಾಗೂ ಎಂಬೆಸಿ ಗ್ರೂಪ್ ಕಟ್ಟಡ, ನಾಗವಾರದ ಕಾರ್ಲೆ ಕಂಪನೀಸ್, ಜೆ.ಪಿ. ನಗರದ ಪೂರ್ವಂಕರ, ಕೆ.ಆರ್. ಪುರದ ವಿ.ಆರ್. ಮಾಲ್, ಪ್ರಥಮದರ್ಜೆ ಕಾಲೇಜು ಕಟ್ಟಡಗಳನ್ನು ಪರಿಶೀಲಿಸಲಾಗುವುದು ಎಂದರು.