ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ಗೆ 44 ಸಾವಿರ ಪ್ರೇಮ ಸಂದೇಶಗಳು ಬಂದಿರುವುದಾಗಿ ಓದಿ ಅಚ್ಚರಿ, ಆತಂಕ ಉಂಟಾಯಿತು. ‘ಭಾರತದಲ್ಲಿ ರಾಜಕೀಯ ಸರಿ ಇಲ್ಲ, ರಾಜಕಾರಣಿಗಳು ಸರಿ ಇಲ್ಲ’ ಎನ್ನುವ ನಾವು, ರಸ್ತೆ ಅವ್ಯವಸ್ಥೆ ಬಗ್ಗೆ ದೂರು ನೀಡಲು ಇರುವ ಲೋಕೋಪಯೋಗಿ ಇಲಾಖೆಯ ವಾಟ್ಸ್ಆ್ಯಪ್ ಸಂಖ್ಯೆ ಬಳಸಿ ಪ್ರೇಮ ನಿವೇದನೆ ಮಾಡಿಕೊಳ್ಳುವ ನಮ್ಮ ಪ್ರಜೆಗಳೆಷ್ಟು ಪ್ರಬುದ್ಧರು ಎನ್ನುವುದನ್ನು ಅವಲೋಕಿಸಬೇಕಿದೆ (ಇಲ್ಲಿ ಬರೀ ಆ ಹೆಣ್ಣುಮಕ್ಕಳ ಕುರಿತು ಹೇಳಿದ್ದಲ್ಲ).
-ಗುರುಪ್ರಸಾದ್ ಬಳ್ಳಾರಿ, ಮೈಸೂರು