ರಾಜ್ಯದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ‘ಉಡುಪಿ ಚಲೋ’ ಜಾಥಾ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಕನಕ ಮತ್ತು ಕೃಷ್ಣನ ಮೂರ್ತಿ ಕುರಿತು ಹೆಚ್ಚು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಮಾತನಾಡುವುದು ಸಾಂಸ್ಕೃತಿಕ ಸಂಘರ್ಷ ಇರಬಹುದು. ಆದರೆ ಚರ್ಚೆಯು ಮೂರ್ತಿಗಳ ವಿಷಯಕ್ಕೇ ಸೀಮಿತವಾಗುತ್ತಿದೆಯೇನೊ ಎನಿಸುತ್ತಿದೆ.
ಇದು ಹೋರಾಟದ ಮುಖ್ಯ ಕಾರ್ಯಸೂಚಿಯಾದ ‘ದಲಿತರಿಗೆ ಭೂಮಿ ಮತ್ತು ಆಹಾರದ ಹಕ್ಕಿನ ಬೇಡಿಕೆ’ಯನ್ನು ಪಲ್ಲಟ ಮಾಡುವ ಮಾದರಿಯಲ್ಲಿ ಕಾಣಿಸುತ್ತಿರುವುದು ಆತಂಕ ಹುಟ್ಟಿಸುತ್ತಿದೆ.
-ಸಂದೀಪ್ ಡಿ.ಡಿ., ಚಿಕ್ಕಮಗಳೂರು