ಮಂಡ್ಯ: ಮಹಾದಾಯಿ ವಿಚಾರದಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಹೇಳಿದರು.
ನಾಗಮಂಗಲದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೋರಾಟದಿಂದ ಏನು ಪ್ರಯೋಜನವಿಲ್ಲ. ಎರಡೂ ರಾಜ್ಯದವರು ಮಾತುಕತೆ ನಡೆಸಿ ಸಮಸ್ಯೆಗೆ ಇತಿಶ್ರೀ ಹಾಡುತ್ತಾರೆಂಬ ವಿಶ್ವಾಸವಿದೆ ಎಂದರು.
ಸಂಸದ ವರುಣ್ ಗಾಂಧಿ ಅವರ ಹನಿಟ್ರ್ಯಾಪ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಅದನ್ನು ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ ಎಂದು ನುಣುಚಿಕೊಂಡರು.
ಮೇಲ್ನೋಟಕ್ಕೆ ಈ ವಿಚಾರದಲ್ಲಿ ವರುಣ್ ಗಾಂಧಿ ಯಾವ ತಪ್ಪು ಮಾಡಿಲ್ಲ ಅನಿಸುತ್ತದೆ ಎಂದಷ್ಟೇ ಹೇಳಿದರು.