ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದೊಡ್ಡಬಳ್ಳಾಪುರದ ಜಿ.ಯಲ್ಲಪ್ಪ, ಅಧ್ಯಯನದ ನಿಮಿತ್ತ ರಾಜ್ಯದ ಎಂಟೂ ಸೆಂಟ್ರಲ್ ಜೈಲುಗಳಿಗೆ ಹೋಗಿ ವಾಸ್ತವ ಪರಿಸ್ಥಿತಿಯನ್ನು 302 ಪುಟಗಳ ಆ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ಜೈಲಿನಲ್ಲಿದ್ದುಕೊಂಡೇ ಅಲ್ಲಿನ ಸುಧಾರಣೆ ಬಗ್ಗೆ ಪುಸ್ತಕ ಬರೆದ ರಾಜ್ಯದ ಮೊದಲ ಕೈದಿ ಎಂಬ ಹೆಗ್ಗಳಿಕೆ ಅವರಿಗೆ ಸಿಕ್ಕಿದೆ.