ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2015ನೇ ಸಾಲಿನ ಚೌಡಯ್ಯ ಪ್ರಶಸ್ತಿಗೆ ಮುಂಬೈನ ಹಿಂದೂಸ್ತಾನಿ ತಬಲಾ ವಾದಕ ಸುರೇಶ್ ತಲ್ವಾಲಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ₹ 5 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
* ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ: ಆರ್. ಪರಮಶಿವನ್, ಬೆಂಗಳೂರು
* ಪಂಪ ಪ್ರಶಸ್ತಿ: ಡಾ. ಬಿ.ಎ.ಸನದಿ, ಕುಮಟಾ, ಉತ್ತರ ಕನ್ನಡ
* ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ: ನೇಮಿಚಂದ್ರ, ಬೆಂಗಳೂರು
* ಜಾನಪದ ಶ್ರೀ ಪ್ರಶಸ್ತಿ: ಸತ್ತೂರ ಇಮಾಂಸಾಬ್, ಬಳ್ಳಾರಿ
* ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ: ಪೀಟರ್ ಲೂಯಿಸ್, ದಕ್ಷಿಣ ಕನ್ನಡ
* ಜಕಣಾಚಾರಿ ಪ್ರಶಸ್ತಿ: ಎನ್. ಪುಷ್ಪಮಾಲಾ, ಬೆಂಗಳೂರು
* ಸಂತ ಶಿಶುನಾಳ ಷರೀಫ ಪ್ರಶಸ್ತಿ: ರತ್ನಮಾಲಾ ಪ್ರಕಾಶ್, ಬೆಂಗಳೂರು
* ಶ್ರೀ ನಿಜಗುಣ ಪುರಂದರ ಪ್ರಶಸ್ತಿ: ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್, ಬೆಂಗಳೂರು
* ಕುಮಾರವ್ಯಾಸ ಪ್ರಶಸ್ತಿ: ಕಮಲಮ್ಮ ವಿಠ್ಠಲರಾವ್, ಬೆಂಗಳೂರು
* ಶಾಂತಲಾ ನಾಟ್ಯ ಪ್ರಶಸ್ತಿ: ಎಂ. ಶಕುಂತಲಾ, ಬೆಂಗಳೂರು
* ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ: ಎಂ.ಎಸ್. ಸಿಂಧೂರ